ಶಿವಮೊಗ್ಗ, ಅ.25: ಈ ವರ್ಷದ ಆರಂಭದಲ್ಲಿ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕುಟುಂಬ ಸದಸ್ಯರಿಗೆ ದುಷ್ಕರ್ಮಿಗಳ ಗುಂಪೊಂದು ಬೆದರಿಕೆ ಹಾಕಿದ ನಂತರ ಮಂಗಳವಾರ ಶಿವಮೊಗ್ಗ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಅಹಿತಕರ ಪರಿಸ್ಥಿತಿಯನ್ನು ತಪ್ಪಿಸಲು ಪೊಲೀಸರು ಜಿಲ್ಲೆಯಾದ್ಯಂತ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ.
ಪೊಲೀಸರ ಪ್ರಕಾರ, ಈ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಸ್ಥಳೀಯರು ಜಮಾಯಿಸಿದ ನಂತರ ದುಷ್ಕರ್ಮಿಗಳು ಪ್ರಕಾಶ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಆಸ್ಪತ್ರೆಗೆ ದಾಖಲಾಗಿರುವ ಪ್ರಕಾಶ್, ಮಾಸ್ಕ್ ಧರಿಸಿದ್ದ ಒಟ್ಟು ಒಂಬತ್ತು ದುಷ್ಕರ್ಮಿಗಳು ಮೂರು ಬೈಕುಗಳಲ್ಲಿ ಬಂದು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸೂಚನೆ ನೀಡಿದರು.
ಫೆಬ್ರವರಿ 20 ರಂದು ಹಿಜಾಬ್ ಬಿಕ್ಕಟ್ಟಿನ ಉತ್ತುಂಗದ ನಡುವೆಯೇ ದುಷ್ಕರ್ಮಿಗಳ ಗುಂಪೊಂದು ಹರ್ಷನನ್ನು ಕತ್ತು ಹಿಸುಕಿ ಕೊಲೆ ಮಾಡಿತ್ತು.
ಹರ್ಷ ಹಿಂದೂ ಎಂದು ಜನಪ್ರಿಯವಾಗಿ ಕರೆಯಲ್ಪಡುತ್ತಿದ್ದ ಹರ್ಷ, ಹಿಂದುತ್ವ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದನು ಮತ್ತು ಗೋವುಗಳ ಅಕ್ರಮ ಸಾಗಾಟವನ್ನು ಪ್ರಶ್ನಿಸಿದ್ದನು. ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಉಗ್ರವಾದ ಹಿಂದುತ್ವ ಸಂದೇಶಗಳನ್ನು ಹಂಚಿಕೊಂಳ್ಳುತ್ತಿದ್ದನು. ಹಿಜಾಬ್ ವಿಷಯದ ಬಗ್ಗೆಯೂ ಪ್ರತಿಕ್ರಿಯಿಸುತ್ತಿದ್ದನು.
ಈ ಕೊಲೆಯು ರಾಜ್ಯದಲ್ಲಿ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿತ್ತು.