ಮುಂಬೈ: ಪಟಾಕಿ ಹೊಡೆಯಬೇಡ ಎಂದು ಬುದ್ದಿ ಹೇಳಲು ಹೋದ ವ್ಯಕ್ತಿಗೆ ಚಾಕುವಿನಿಂದ ಚುಚ್ಚಿ ಕೊಂದ ಘಟನೆ ಮುಂಬೈನ ಶಿವಾಜಿನಗರದ ಮೈದಾನದ ಬಳಿ ನಡೆದಿದೆ. ಆರೋಪಿಗಳೆಲ್ಲರೂ 12ರಿಂದ 15 ವರ್ಷದ ಒಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತನನ್ನು ಸುನಿಲ್ ನಾಯ್ಡು ಎಂದು ಗುರುತಿಸಲಾಗಿದೆ. ಗಾಜಿನ ಬಾಟಲಿಯಲ್ಲಿ ಪಟಾಕಿ ಇಟ್ಟು ಹೊಡೆಯುತ್ತಿದ್ದಾಗ ಬುದ್ದಿ ಹೇಳಲು ಈ ವ್ಯಕ್ತಿ ಹೋಗಿದ್ದಾನೆ. ಪಟಾಕಿ ಹೊಡೆಯುವುದರಿಂದ ಪರಿಸರಕ್ಕೆ ಆಗುವ ಸಮಸ್ಯೆಗಳ ಬಗ್ಗೆ ವಿವರಿಸಲು ಮುಂದಾದಾಗ ಹುಡುಗ ಜಗಳಕ್ಕೆ ಇಳಿದಿದ್ದಾನೆ. ಸ್ವಲ್ಪ ಸಮಯದ ನಂತರ ಹುಡುಗ ಅಣ್ಣಂದಿರು ಅಲ್ಲಿಗೆ ಬಂದಿದ್ದಾರೆ. ಅವರೂ ಅಪ್ರಾಪ್ತರೇ. ಮೂವರೂ ಏಕಾಏಕಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದಾರೆ. ನಂತರ ದೊಡ್ಡ ಅಣ್ಣ ಚಾಕುವಿನಿಂದ ವ್ಯಕ್ತಿಗೆ ಚುಚ್ಚಿದ್ದಾನೆ. ಸಂತ್ರಸ್ಥನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಪ್ರಕರಣದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.