ಶಿವಮೊಗ್ಗ: ಅತ್ಯಾಚಾರಿಗಳಿಗೆ ಪೊಲೀಸ್ ಮತ್ತು ಸರ್ಕಾರದ ಬಗ್ಗೆ ಭಯವೇ ಇಲ್ಲ ಎಂದು
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ. ಎಸ್. ಈಶ್ವರಪ್ಪ
ಹೇಳಿದ್ದಾರೆ. ಮೈಸೂರು ವಿದ್ಯಾರ್ಥಿ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧ ಮಾತಾಡಿದ
ಈಶ್ವರಪ್ಪ, ಅತ್ಯಾಚಾರಿಗಳ ವಿರುದ್ಧ ಕಾನೂನು ತಿದ್ದುಪಡಿ ಅಗತ್ಯವಿದೆ ಎಂದರು.
ರಾಜ್ಯದಲ್ಲಿ ಅತ್ಯಾಚಾರಿಗಳಿಗೆ ಸರ್ಕಾರ ಮತ್ತು ಪೊಲೀಸರ ಬಗ್ಗೆ ಭಯವೇ ಇಲ್ಲದಂತಾಗಿದೆ.
ಹಾಗಾಗಿ ಮೈಸೂರು ಮಾತ್ರವಲ್ಲ ಎಲ್ಲೆಡೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳು
ಮರುಕಳಿಸುತ್ತಿವೆ. ಆದ್ದರಿಂದ ಅತ್ಯಚಾರಿಗಳಿಗೆ ಕಠಿಣ ಕಾನೂನು ವಿಧಿಸುವ ಅಗತ್ಯ ಇದೆ.
ಅದಕ್ಕಾಗಿ ಈಗಿನ ಕಾನೂನಿಗೆ ತಿದ್ದುಪಡಿ ತರಬೇಕಿದೆ ಎಂದು ಕೆ.ಎಸ್ ಈಶ್ವರಪ್ಪ ಆಕ್ರೋಶ
ಹೊರಹಾಕಿದರು.ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ
ತೆಗೆದುಕೊಳ್ಳಲಾಗುತ್ತದೆ. ನಾನು ಈ ಹಿಂದೆ ವಿಧಾನ ಪರಿಷತ್ ವಿರೋಧ ಪಕ್ಷದ
ನಾಯಕನಾಗಿದ್ದಾಗ ಆರು ವರ್ಷದ ಮಗುವಿನ ಮೇಲೆ ದುಷ್ಕರ್ಮಿಗಳು ಅತ್ಯಾಚಾರ
ನಡೆಸಿದ್ದರು. ಆಗಲೂ ನಾನು ಘಟನೆಯನ್ನು ಖಂಡಿಸಿದ್ದೆ. ಅತ್ಯಾಚಾರಿಗಳಿಗೆ ಕಠಿಣ
ಶಿಕ್ಷೆ ನೀಡುವ ವಿಷಯದಲ್ಲಿ ಕಾನೂನು ತಿದ್ದುಪಡಿ ಮಾಡುವುದಾಗಿ ಅಂದಿನ ಗೃಹ ಸಚಿವ
ಕೆ.ಜೆ.ಜಾರ್ಜ್ ಭರವಸೆ ನೀಡಿದ್ದರು ಎಂದು ಹೇಳಿದರು.
ಈಗಲೂ ಹಿಂದಿನ ಕಾನೂನೇ ಜಾರಿಯಲ್ಲಿದೆ. ಘಟನೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ
ನೀಡಿರುವ ಹೇಳಿಕೆ ಸಹಜವಾಗಿದೆ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ
ಪೊಲೀಸರು ಶಂಕಿತ ದಾಳಿಕಾರರ ಅಪರಾಧಿಗಳನ್ನು ಬಂಧಿಸಿರುವ ಕೆಲಸ ಮಾಡಿದ್ದಾರೆ. ಯಾರಿಗೂ
ನೋವು ಮಾಡಬೇಕು ಎಂದು ಆರಗ ಮಾತಾಡಿಲ್ಲ ಎಂದು ಸಮರ್ಥಿಸಿಕೊಂಡರು.
ಅತ್ಯಾಚಾರಿಗಳಿಗೆ ಪೊಲೀಸ್, ಸರ್ಕಾರದ ಬಗ್ಗೆ ಭಯ ಇಲ್ಲ; ಕಾನೂನಿಗೆ ತಿದ್ದುಪಡಿ ಅಗತ್ಯ’ -ಕೆ.ಎಸ್. ಈಶ್ವರಪ್ಪ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.