ಚಿಕ್ಕಮಗಳೂರು: ನಾಲ್ಕು ಬಾರಿ ಶಾಸಕರಾಗಿ, ಮಂತ್ರಿಯಾಗಿ ಚಿಕ್ಕಮಗಳೂರು ಅಭಿವೃದ್ಧಿಗೆ ೪-೫ ಸಾವಿರ ಕೋಟಿ ರೂಗಳ ವಿವಿಧ ಕಾಮಗಾರಿಗಳನ್ನು ಶಾಸಕ ಸಿ.ಟಿ.ರವಿ ಕೈಗೊಂಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಟಿ.ರಾಜಶೇಖರ್ ಹೇಳಿದರು.
ಬಿಜೆಪಿ ಜಿಲ್ಲಾ ವಕ್ತಾರರಾದ ಟಿ. ರಾಜಶೇಖರ್ ಮತ್ತು ದೇವನೂರು ರವಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಭಿವೃದ್ಧಿ ಕೆಲಸಗಳನ್ನು ಮಾಡಿ, ಚಿಕ್ಕಮಗಳೂರಿಗೆ ಬಹು ದಿನಗಳ ಕನಸಾಗಿದ್ದ ಮೆಡಿಕಲ್ ಕಾಲೇಜು ಹಾಗೂ ಬಯಲು ಸೀಮೆಯ ಎಲ್ಲಾ ಕೆರೆಗಳಿಗೆ ನೀರನ್ನು ತುಂಬಿಸುವ ಕೆಲಸ ಆಗಿದೆ. ಚಿಕ್ಕಮಗಳೂರು ನಗರ ವನ್ನು ಇಡೀ ರಾಜ್ಯದಲ್ಲೇ ಮಾದರಿ ನಗರವನ್ನಾಗಿ ಮಾಡಿ ಜನರಿಂದ ಪ್ರಶಂಸೆಯನ್ನು ಪಡೆದುಕೊಂಡಿದ್ದಾರೆ .
ಸಿ.ಟಿ.ರವಿ ಅವರ ಜನಪ್ರಿಯತೆಯನ್ನು ಸಹಿಸಿಕೊಳ್ಳದ ಕಾಂಗ್ರೆಸ್ಸಿನ ಕೆಲವು ನಾಯಕರುಗಳು ದಾಖಲೆಗಳನ್ನು ನೀಡದೆ ಭ್ರಷ್ಠಾಚಾರದ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜ್ಯದ ನಾಯಕರುಗಳನ್ನು ಮೆಚ್ಚಿಸಲು ಸಿ.ಟಿ.ರವಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆಂದು ಹೇಳಿದ ವಕ್ತಾರರು ಸಿ.ಟಿ.ರವಿ ಐದನೇ ಬಾರಿಯೂ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಆ ನಾಯಕರುಗಳಿಗೂ ಗೊತ್ತಿದೆ ಹಾಗಾಗಿ ಸೋಲಿನ ಹತಾಶೆಯಿಂದ ಮತ್ತು ಕಾಂಗ್ರೆಸ್ ಟಿಕೆಟ್ ಕೈ ತಪ್ಪುವ ಹತಾಶೆಯಿಂದ ಹೆಚ್.ಡಿ. ತಮ್ಮಯ್ಯ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ದೂರಿದರು.
ತಮ್ಮಯ್ಯ ಕಳೆದ ೧೫ ವರ್ಷದ ಹಿಂದೆ ನಗರಸಭೆಯ ಅಧ್ಯಕ್ಷರಾಗಿದ್ದವರು, ಇತ್ತೀಚೆಗೆ ಯಾವುದೇ ಚುನಾಯಿತ ಹುದ್ಧೆ ಇಲ್ಲಾ ಆದರೂ ೩೦ ಶೇ ಕಮಿಷನ್ ಪಡೆಯುತ್ತೇನೆ ಎಂದು ಸಾರ್ವಜನಿಕವಾಗಿ ಹೇಳಿಕೆ ಕೊಟ್ಟಿದ್ದಾರೆ . ಕಾಂಗ್ರೆಸ್ ಪಕ್ಷ ಸೇರಿ ಒಂದೇ ತಿಂಗಳಾಗಿದೆ. ಕಾಂಗ್ರೆಸ್ ನಾಯಕರು ಬಿಜೆಪಿಯ ಏಜೆಂಟ್ ಗಳು ಎಂದು ಹೇಳಿಕೆ ಕೊಟ್ಟಿದ್ದಾರೆ. ತಮ್ಮಯ್ಯನವರಿಗೆ ನೈತಿಕತೆ ಇದ್ದರೇ ಅವರು ಕಾಂಗ್ರೆಸ್ ನಾಯಕರ ಹೆಸರುಗಳನ್ನು ಬಹಿರಂಗ ಪಡಿಸಬೇಕು ಮತ್ತು ಯಾವ ಯಾವ ಡೀಲ್ನಲ್ಲಿ ತಾವು ೩೦% ಕಮಿಷನ್ ಪಡೆದಿದ್ದಾರೆಂದು ಎಂದು ಬಹಿರಂಗವಾಗಿ ಹೇಳಬೇಕು ಎಂದರು.