ಕೊಟ್ಟಿಗೆಹಾರ: ಕೊಟ್ಟಿಗೆಹಾರ ಚೆಕ್ಪೋಸ್ನಲ್ಲಿ ದಾಖಲೆ ಇಲ್ಲದ ೧.೧೦ ಲಕ್ಷ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕೊಟ್ಟಿಗೆಹಾರ ಚೆಕ್ಪೋಸ್ಟ್ನಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಮಂಗಳೂರಿನಿಂದ ಮೂಡಿಗೆರೆ ಕಡೆಗೆ ಸಾಗುತ್ತಿದ್ದ ತರಕಾರಿ ಸಾಗಿಸುವ ಪಿಕ್ಅಪ್ ವಾಹನವನ್ನು ಪರಿಶೀಲಿಸಿದಾಗ ದಾಖಲಾತಿಗಳಿಲ್ಲದ ೧.೧೦ ಲಕ್ಷ ಹಣ ಪತ್ತೆಯಾಗಿದೆ. ಚೆಕ್ಪೋಸ್ಟ್ನಲ್ಲಿದ್ದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಹಣವನ್ನು ವಶಪಡಿಸಿಕೊಂಡಿದ್ದಾರೆ.
ತರಕಾರಿ ಮಾರಾಟದ ಹಣ ಎಂದು ಅವಲತ್ತುಕೊಂಡ ಚಾಲಕ ಮಲೆನಾಡಿನಿಂದ ಕರಾವಳಿಗೆ ದಿನನಿತ್ಯ ತರಕಾರಿ ಸಾಗಾಟದ ವಾಹನಗಳು ಸಂಚರಿಸುತ್ತವೆ. ತರಕಾರಿ ಮಾರಾಟ ಮಾಡಲೆಂದು ಮಂಗಳೂರಿಗೆ ಹೋಗಿ ಹಿಂದಿರುಗುವಾಗ ಕೊಟ್ಟಿಗೆಹಾರದ ಚೆಕ್ಪೋಸ್ಟ್ನಲ್ಲಿದ್ದ ಅಧಿಕಾರಿಗಳು ಪಿಕ್ಅಪ್ ವಾಹನ ಪರಿಶೀಲಿಸಿದಾಗ ೧.೧೦ ಲಕ್ಷ ಹಣ ಸಿಕ್ಕಿದೆ. ಅಧಿಕಾರಿಗಳು ದಾಖಲೆ ನೀಡುವಂತೆ ಕೇಳಿದ್ದು ತರಕಾರಿಯನ್ನು ಮಂಗಳೂರಿನ ಮಾರ್ಗ ಬದಿಯಲ್ಲಿ ಸಿಗುವ ಅನೇಕ ಅಂಗಡಿಗಳಿಗೆ ಚಿಲ್ಲರೆಯಾಗಿ ತರಕಾರಿಯನ್ನು ಮಾರಾಟ ಮಾಡುವುದರಿಂದ ದಾಖಲೆಗಳು ಇಲ್ಲ ಎಂದು ತಿಳಿಸಿದ್ದಾರೆ.
ಅಧಿಕಾರಿಗಳು ನಿಯಮಾನುಸಾರ ೧.೧೦ ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ವಾಹನ ತಪಾಸಣೆ ವೇಳೆ ಸಿಗುವ ಹಣವನ್ನು ವಶಪಡಿಸಿಕೊಳ್ಳುವುದು ಸರಿಯಾದರೂ ಕರವಳಿ ಕಡೆಗೆ ವ್ಯಾಪಾರಕ್ಕಾಗಿ ಹೋಗುವ ತರಕಾರಿ, ಕಾಯಿ, ಸರಕು ಮಾರಾಟದ ವಾಹನಗಳ ಚಾಲಕರು ಮಾರಾಟ ಮಾಡಿ ಹಿಂದಿರುವಾಗ ಮಾರಾಟದ ಹಣ ಜೊತೆಗಿರುತ್ತದೆ. ಆದರೆ ತೋರಿಸಲು ದಾಖಲೆಗಳು ಇಲ್ಲದೆ ಇರುವುದರಿಂದ ವ್ಯಾಪರಸ್ಥರು ಚಾಲಕರು ಪರದಾಡುವಂತಾಗಿದೆ.