ಚಿಕ್ಕಮಗಳೂರು: ರಂಜಾನ್ ಹಬ್ಬದ ಪ್ರಯುಕ್ತ ಷರೀಪ್ಗಲ್ಲಿಯಲ್ಲಿ ಮುಸ್ಲಿಂ ಬಾಂಧವರಿಗೆ ಸಮಾಜದ ಮುಖಂಡ ಸಿ.ಎನ್.ಅಕ್ಮಲ್ ಅವರು ತಮ್ಮ ಸ್ವಗೃಹ ಸಮೀಪದಲ್ಲಿ ಹಬ್ಬದ ಆಚರಣೆಗೆ ಉಚಿತವಾಗಿ ದಿನಸಿ ಕಿಟ್ನ್ನು ನಿವಾಸಿಗಳಿಗೆ ವಿತರಿಸಿದರು.
ಬಳಿಕ ಮಾತನಾಡಿದ ಅವರು ರಂಜಾನ್ ಹಬ್ಬದ ಮುಕ್ತಾಯವು ಇನ್ನೂ ಕೆಲವು ದಿನಗಳಲ್ಲಿ ಬಾಕಿಯಿರುವ ಹಿನ್ನೆಲೆಯಲ್ಲಿ ನಿವಾಸಿಗಳಿಗೆ ಹಬ್ಬವನ್ನು ಆಚರಿಸಲು ದಿನೋಪಯೋಗಿ ವಸ್ತುಗಳ ಕಿಟ್ ಅನ್ನು ವಿತರಿಸಲಾಗಿದ್ದು ಸಾರ್ವಜನಿಕರು ಅತ್ಯಂತ ಸಡಗರದಿಂದ ಆಚರಣೆ ಮಾಡಬೇಕು ಎಂದು ಶುಭ ಕೋರಿದರು.
ಅತ್ಯಂತ ಆರ್ಥಿಕ ಸಂಕಷ್ಟದಲ್ಲಿರುವ ಮುಸ್ಲೀಂ ಬಾಂಧವರಿಗೆ ತಮ್ಮ ವೈಯಕ್ತಿಕವಾಗಿ ಕಿಟ್ಗಳನ್ನು ವಿತರಣೆ ಮಾಡಲಾಗುತ್ತಿದ್ದು ಇಂದು ಸುಮಾರು ೨೦೦ಕ್ಕೂ ಹೆಚ್ಚು ಮಂದಿಗೆ ಕಿಟ್ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಸಾದಿಕ್, ರಿಜ್ವಾನ್, ಮುಬರಕ್, ಜಬೀ, ಅಜ್ಮಲ್ ಸೇರಿದಂತೆ ಮತ್ತಿತರರು ಹಾಜರಿದ್ದರು.