ಚಿಕ್ಕಮಗಳೂರು: ತಾಲ್ಲೂಕಿನ ಆಲ್ದೂರು ಸಮೀಪದ ಅರೇನೂರಿನಲ್ಲಿ ಕಾಫಿ ತೋಟದಲ್ಲಿ ಗುಡ್ಡದ ಮಣ್ಣು ಕುಸಿದಿರುವ ಪ್ರದೇಶವನ್ನು ಸಚಿವ ಬಿ.ಎ.ಬಸವರಾಜು ವೀಕ್ಷಿಸಿದರು.
ಕಾಫಿ ಗಿಡಗಳು ಹಾನಿಯಾಗಿರುವುದು, ತೋಟದಲ್ಲಿ ಕೆಸರು ನೀರು ಹರಿಯುತ್ತಿರುವುದು, ರಸ್ತೆ ಹದಗೆಟ್ಟಿರುವುದನ್ನು ವೀಕ್ಷಿಸಿದರು.
ಮಲೆನಾಡು ಭಾಗದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು ಅದರಿಂದ ಹಾನಿಗೊಳಗಾದ ಭಾಗಗಳನ್ನು ಇಂದು ಬೆಳಿಗ್ಗೆ ಚಿಕ್ಕಮಗಳೂರು ತಾಲೂಕಿನ ಮೂಡಿಗೆರೆ ಕ್ಷೇತ್ರದ ವ್ಯಾಪ್ತಿಗೆ ಬರುವ ಅರೇನೂರು ಗ್ರಾಮದ ತೋಟಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಣೆ ಮಾಡಿ ಗ್ರಾಮಸ್ಥರು, ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.#chikkamagaluru pic.twitter.com/gqLJ12z5Ry
— Byrathi Basavaraja (@BABasavaraja) July 16, 2022
‘ಮಳೆ ಹಾನಿ ಪ್ರದೇಶ ವೀಕ್ಷಣೆ ಮಾಡಿದ್ದೇವೆ. ಸಂತ್ರಸ್ತರಿಗೆ ಪರಿಹಾರ ಒದಗಿಸಲು ಕ್ರಮ ವಹಿಸಲಾಗುವದು’ ಎಂದು ಸಚಿವ ಬಸವರಾಜು ತಿಳಿಸಿದರು.