News Karnataka Kannada
Saturday, April 27 2024
ಚಿಕಮಗಳೂರು

ಕಮಲ ಮತ್ತೆ ಅರಳುವುದು ಶತಸಿದ್ಧ- ಆರ್.ಅಶೋಕ್

Lotus will bloom again: R Ashoka
Photo Credit : News Kannada

ಚಿಕ್ಕಮಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿದೆ. ನಂತರ ರಾಜ್ಯದ ಕಾಂಗ್ರೆಸ್ ಸರ್ಕಾರ ಪಥನಗೊಳ್ಳಲಿದೆ, ಕ್ಷಣ ಮಾತ್ರವೂ ಅಧಿಕಾರದಲ್ಲಿ ಇರುವುದಿಲ್ಲ ಎಂದು ಮಾಜಿ ಸಚಿವ ಆರ್.ಅಶೋಕ್ ಭವಿಷ್ಯ ನುಡಿದರು.

ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮತ್ತೆ ಮೋದಿಯವರು ಪ್ರಧಾನಿಯಾದ ನಂತರ ಕಾಂಗ್ರೆಸ್ ಸರ್ಕಾರವನ್ನು ನೆಲಕಚ್ಚಿಸುವ ಕೆಲಸವನ್ನು ನಮ್ಮ ನಾಯಕರು ಮಾಡಿಯೇ ಮಾಡುತ್ತಾರೆ ಎಂದು ಹೇಳಿದರು.

ಜನರು ಅಮಾಯಕರಿದ್ದಾರೆ. ಕಾಂಗ್ರೆಸ್ಸಿಗರು ಅವರಿಗೆ ಗ್ಯಾರಂಟಿಗಳನ್ನು ಕೊಟ್ಟು ಮರಳು ಮಾಡಿದರು. ಆದರೆ ನಾವು ಮಾಡಿದ ಸಾಧನೆಯನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾದೆವು. ಕಾಂಗ್ರೆಸ್ ಸರ್ಕಾರಕ್ಕೆ ಜನರು ಈಗಲೇ ಛೀಮಾರಿ ಹಾಕುತ್ತಿದ್ದಾರೆ. ಎಲ್ಲ ಮಹಿಳೆಯರಿಗೆ ಹಣ ನೀಡುತ್ತೇವೆ ಎಂದು ಹೇಳಿ ಕಾಂಗ್ರೆಸ್ ಪಕ್ಷ ಕುಟುಂಬದಲ್ಲೇ ಬೆಂಕಿ ಹಚ್ಚಿದೆ. ಉಚಿತ ಬಸ್ ಪ್ರಯಾಣ ಘೋಷಿಸಿದರು. ಜನರು ಬಸ್‌ನ ಗ್ಲಾಸು ಡೋರ್ ಗಳನ್ನು ಕಿತ್ತುಕೊಂಡು ಹೋಗುತ್ತಿದ್ದಾರೆ. ಟೈಯರ್ ಮಾತ್ರ ಉಳಿಸಿದ್ದಾರೆ. ಖಾಸಗಿ ಬಸ್ಸುಗಳು ಆಟೋರಿಕ್ಷಾ ದವರು ತೊಂದರೆ ಅನುಭವಿಸುವಂತಾಗಿದೆ ಎಂದರು.

ಕಳ್ಳಾಟ ನಡೆಯಲಿಲ್ಲ
ಈಗ ಜನರಿಗೆ ವಿತರಿಸಲಾಗುತ್ತಿರುವ ೫ ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತಿರುವುದು ಎಂಬುದು ಈವರೆಗೂ ಯಾರಿಗೂ ಗೊತ್ತೇ ಇರಲಿಲ್ಲ. ಅಕ್ಕಿ ಕೇಂದ್ರದ್ದು, ಚೀಲಮಾತ್ರ ಸಿದ್ದರಾಮಯ್ಯ ಅವರದ್ದು ಅದಕ್ಕೆ ಫೋಟೋ ಹಾಕಿಕೊಂಡು ಪ್ರಚಾರ ಪಡೆದರು. ಈಗ ಮತ್ತೆ ೧೦ ಕೆಜಿ ಅಕ್ಕಿಯನ್ನು ಕೇಂದ್ರದಿಂದ ಪಡೆದು ಚೀಲದ ಮೇಲೆ ಸೀಲ್ ಹಾಕಿ ಕೊಳ್ಳುವ ಕಳ್ಳಾಟ ಆಡಲು ಪ್ರಯತ್ನಿಸಿದರು. ಆದರೆ ಅದು ನಡೆಯಲಿಲ್ಲ ಎಂದರು.

ಮೋದಿ ಕಡೆಗೆ ಬಾಣ
೫ ಗ್ಯಾರಂಟಿಗಳನ್ನು ಈಡೇರಿಸಲಾಗದೆ ಕಾಂಗ್ರೆಸಿಗರು ಈಗ ಮೋದಿಯ ಕಡೆ ಬಾಣ ಬಿಡಲು ಪ್ರಾರಂಭಿಸಿದ್ದಾರೆ. ಬಿಜೆಪಿಯವರೇ ಮೋದಿ ಅವರ ಹೆಸರು ಹೇಳುವುದನ್ನು ಕಡಿಮೆ ಮಾಡಿದ್ದರು. ಆದರೆ ಕಾಂಗ್ರೆಸ್ಸಿಗರು ಎಲ್ಲಿ ಹೋದರು ಈಗ ಮೋದಿ ಎಂದು ಕೂಗಲಾರಂಭಿಸಿದ್ದಾರೆ ಇದಕ್ಕಾಗಿ ಕಾಂಗ್ರೆಸ್‌ಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಹ್ಯಾಕ್ ಎಂದರೇನು ಗೊತ್ತಿಲ್ಲದವರು

ಗ್ಯಾರಂಟಿಗಳನ್ನು ಕೊಡುವುದಕ್ಕೆ ಸರ್ವರ್ ಹ್ಯಾಕ್ ಆಗುತ್ತದೆ ಎಂದು ಸಚಿವರೊಬ್ಬರು ಹೇಳುತ್ತಿದ್ದಾರೆ ಅವರಿಗೆ ಹ್ಯಾಕ್ ಎಂದರೆ ಏನೆಂದರೆ ಗೊತ್ತಿಲ್ಲ. ಸ್ಮಶಾನದಲ್ಲಿ ಅಮಾವಾಸ್ಯೆಯ ದಿನ ಊಟ ಮಾಡೋದು ಬಿಟ್ಟು ಬೇರೇನು ಅವರಿಗೆ ತಿಳಿದಿಲ್ಲ ಎಂದು ಟೀಕಿಸಿದರು.

ಕನ್ನಭಾಗ್ಯ
ಅನ್ನ ಅನ್ನಭಾಗ್ಯ ನಿನ್ನದಲ್ಲ. ನಿನ್ನದು ಕನ್ನ ಭಾಗ್ಯ ಎಂದು ಸಿದ್ದರಾಮಯ್ಯ ಅವರನ್ನು ಟೀಕಿಸಿದ ಮಾಜಿ ಸಚಿವ ಆರ್. ಅಶೋಕ್, ೧೦ ಕೆಜಿ ಅಕ್ಕಿ ಕೊಡುತ್ತೇವೆ ಎನ್ನುವುದು ನರೇಂದ್ರ ಮೋದಿ ಅವರ ಪ್ರಣಾಳಿಕೆ ಅಲ್ಲ ಅದು ಕಾಂಗ್ರೆಸ್‌ನ ಪ್ರಣಾಳಿಕೆ ಆದರೂ ಅದನ್ನು ನರೇಂದ್ರ ಮೋದಿಯವರು ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಬಯಸುತ್ತಿದೆ ಎಂದು ಟೀಕಿಸಿದರು.

ಗೋಹಂತಕರಿಗೆ ಪರಿಹಾರ
ಗೋ ಹತ್ಯೆ ಮಾಡಿ ಸತ್ತವರಿಗೆ ಈ ಸರ್ಕಾರ ಪರಿಹಾರ ಕೊಡುತ್ತಿದೆ. ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳನ್ನು ಜಾರಿಗೆ ತರುವವರೆಗೆ ಬಿಡಬಾರದು ಎಂದರು.

ಅಲಿಬಾಬ ೪೦ ಕಳ್ಳರು
ಆಲಿಬಾಬ ೪೦ ಕಳ್ಳರು ಈಗ ಮೋದಿ ವಿರುದ್ಧ ಒಂದಾಗುತ್ತಿದ್ದಾರೆ. ಮೇವು, ಮಣ್ಣು, ಕಲ್ಲಿದ್ದಲು ಎಲ್ಲವನ್ನು ತಿಂದವರು ಈ ತಂಡದಲ್ಲಿದ್ದಾರೆ. ಅವರ ಪ್ರಯತ್ನಕ್ಕೆ ಗೆಲುವು ಆಗುವುದಿಲ್ಲ ಎಂದು ಟೀಕಿಸಿದರು.

ಜಿಲ್ಲಾ ಬಿಜೆಪಿ ಅದ್ಯಕ್ಷ ಎಚ್.ಸಿ.ಕಲ್ಮರು ಡಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಸಿ.ಟಿ.ರವಿ, ಶಾಸಕ ಎಸ್.ಟಿ. ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮಾಜಿ ಶಾಸಕರುಗಳಾದ ಬೆಳ್ಳಿ ಪ್ರಕಾಶ್, ಡಿ.ಎಸ್.ಸುರೇಶ್, ಮುಖಂಡರುಗಳಾದ ದೀಪಕ್ ದೊಡ್ಡಯ್ಯ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು