ಚಿಕ್ಕಮಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ, ಕುಮಾರಸ್ವಾಮಿ ಅವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ದತ್ತಪೀಠಕ್ಕೆ ಮಾಲೆ ಧರಿಸಿ ಬರಲಿ ಎಂದು ಬಿಜೆಪಿ ಮುಖಂಡ ಸಿ.ಟಿ ರವಿ ಹೇಳಿದ್ದಾರೆ. ಹಿಂದೂ ಎಂದು ಹೇಳಿಕೊಳ್ಳಲು ಗರ್ವಬೇಕು. ಸಮಾಜ ಕೂಡ ಅದನ್ನೇ ನಿರೀಕ್ಷೆ ಮಾಡುತ್ತದೆ. ಕುಮಾರಸ್ವಾಮಿ ಹೇಳಿಕೆ ಸಿದ್ದರಾಮಯ್ಯ ಅವರಿಗೆ ಮಾದರಿ ಎಂದು ಹೇಳಿದರು.
ನಾನೂ ಹಿಂದೂ ಅಲ್ವ ನನ್ನ ಹೆಸರಿನಲ್ಲೆ ಸಿದ್ದರಾಮ ಇದ್ದಾನೆ ಎಂದಿದ್ದೀರಿ ಮಾಲೆ ಹಾಕಿ ಬನ್ನಿ ನೀವು ಬಂದರೆ ಸಚಿವ ಜಮೀರ್ ಕೂಡ ಮಾಲೆ ಹಾಕುತ್ತಾರೆ. ಐದು ದಶಕಗಳ ಸತ್ಯದ ಹೋರಾಟಕ್ಕೆ ಬಲ ಬರಲಿದೆ ಎಂದರು.
ಹಿಂದುತ್ವದ ವಿಚಾರ ಬಂದಾಗ ಹಿಂದೆ ನೋಡಲೇಬಾರದು. ಮುಂದಕ್ಕೆ ನೋಡಬೇಕು. ನಮ್ಮ ಧರ್ಮದ ಪ್ರಕಾರ ನಡೆದುಕೊಳ್ಳಲು ಯಾರಿಗೂ ಹೆದರಬೇಕಿಲ್ಲ ಚುನಾವಣೆ ಸಮಯಕ್ಕೆ ಹಿಂದೂಗಳಾಗಬಾರದು ಜೀವನ ಪರ್ಯಂತ ಹಿಂದೂ ಆಗಿ ಇರಬೇಕು ಎಂದರು.