ಚಿಕ್ಕಮಗಳೂರು ; ಗೃಹಿಣಿಯೊಬ್ಬಳು ಪ್ರಿಯಕರನ ಜತೆ ಸೇರಿ ತನ್ನದೇ ಮನೆಗೆ ಕನ್ನ ಹಾಕಿ ಎರಡು ಲಕ್ಷ ರೂಪಾಯಿ ಮೌಲ್ಯದ ಒಡವೆ ಕದ್ದೊಯ್ದ ಘಟನೆ ನಡೆದಿದೆ. ಕಡೂರು ತಾಲೂಕಿನ ದೊಡ್ಡಬೋಕಿಕೆರೆ ಗ್ರಾಮದ ನಿವಾಸಿಯಾಗಿದ್ದ ರಾಜೇಶ್, ತನ್ನ ಪತ್ನಿ ಶಕುಂತಲಮಣಿ ಹಾಗೂ ತಾಯಿ ಶಾರದಮ್ಮರನ್ನ ಕರೆದುಕೊಂಡು ಮನೆಗೆ ಬೀಗ ಹಾಕಿಕೊಂಡು ಜಮೀನು ಕೆಲಸಕ್ಕೆ ಹೋಗಿದ್ದರು. . ಮಧ್ಯೆದಲ್ಲಿ ಮನೆಗೆ ಬರುವ ರಾಜೇಶ್ ಪತ್ನಿ ಶಕುಂತಲಮಣಿ, ಮನೆಗೆ ಯಾರೋ ಕನ್ನ ಹಾಕಿದ್ದಾರೆ ಅನ್ನೋ ವಿಚಾರವನ್ನ ತನ್ನ ಗಂಡ ಹಾಗೂ ಅತ್ತೆಗೆ ತಿಳಿಸುತ್ತಾಳೆ. ಮನೆಯ ಬೀರುವಿನಲ್ಲಿದ್ದ 20 ಗ್ರಾಂ ಚಿನ್ನದ ಬ್ರೇಸ್ ಲೇಟ್, 23 ಗ್ರಾಂ ತೂಕದ ಚಿನ್ನದ ಸರ, 6 ಗ್ರಾಂ ತೂಕದ ಚಿನ್ನದ ಓಲೆ, 25 ಗ್ರಾಂ ತೂಕದ ಮೂರು ಚಿನ್ನದ ಉಂಗುರದ ಜೊತೆಗೆ 25 ಸಾವಿರ ನಗದು ಕೂಡ ಕಳ್ಳತನವಾಗಿತ್ತು.
ಆದರೆ ಶಮಂತಕಮಣಿ ತಾನು ಅಮಾಯಕಿಯಂತೆ ಎಲ್ಲರ ಎದುರು ತೋರಿಸಿಕೊಂಡಿದ್ದಳು. ಯಾವಾಗ ಪೊಲೀಸರಿಗೆ ತನ್ನ ಮೇಲೆ ಅನುಮಾನ ಬಂತು ಅಂತಾ ಗೊತ್ತಾಯ್ತೋ ಜೂನ್ 30ಕ್ಕೆ ಗಂಡನ ಮನೆಯಿಂದ ಎರಡು ವರ್ಷದ ಮಗುವನ್ನ ಬಿಟ್ಟು ಶಕುಂತಲಮಣಿ ಪರಾರಿ ಆದಳು. ತನ್ನ ಮನೆಯಲ್ಲೇ ಕನ್ನ ಹಾಕುವ ವಿಚಾರಕ್ಕೆ ಕುರಿತಂತೆ ಶಕುಂತಲಮಣಿ ಹಾಗೂ ಆಕೆಯ ಪ್ರಿಯಕರನ ನಡುವೆ ಬರೋಬ್ಬರಿ 4 ಸಾವಿರ ಮೆಸೇಜ್ಗಳು ಪರಸ್ಪರ ಇಬ್ಬರ ನಡುವೆ ವಿನಿಮಯ ಆಗಿತ್ತು. ಹೇಗೆ ಕಳ್ಳತನ ಮಾಡಬೇಕು? ಬೇರೆ ಯಾರೋ ಮಾಡಿದ್ದಾರೆ ಅನ್ನೋ ರೀತಿ ಯಾವ ರೀತಿ ನಂಬಿಸಬೇಕು? ಎಲ್ಲವೂ ಆ ಮೆಸೇಜ್ಗಳಲ್ಲಿ ಚರ್ಚೆ ಆಗಿತ್ತು. ಅದರಂತೆ ತನ್ನ ಪ್ಲ್ಯಾನ್ ಜಾರಿಗೊಳಿಸಿ ಚಾಲಾಕಿ ಚೋರಿ ದೃಶ್ಯಂ ಸಿನಿಮಾ ಮಾದರಿಯಲ್ಲಿ ಕಥೆ ಕಟ್ಟಿದ್ದಳು. ಯಾರೋ ಮನೆಗೆ ನುಗ್ಗಿ ಗಾಡ್ರೇಜ್, ಬೀರು ಎಲ್ಲಾ ಮುರಿದು ಚಿನ್ನಾಭರಣ, ಹಣ ದೋಚಿದ್ದಾರೆ ಅಂತಾ ಎಲ್ಲರನ್ನೂ ನಂಬಿಸೋ ಪ್ರಯತ್ನ ಮಾಡಿದ್ದಳು.
ಹೀಗೆ ಇಲ್ಲಿಂದ ಪರಾರಿಯಾದವಳು ಬಳ್ಳಾರಿ ಜಿಲ್ಲೆಯ ಹೊಸಪೇಟೆಗೆ ತೆರಳಿ ಪ್ರಿಯಕರ ಭರತ್ ಕುಮಾರ್ ಎಂಬಾತನ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಹೊಸಪೇಟೆಯಲ್ಲಿ ಆಕೆ ತನ್ನ ಪ್ರಿಯಕರನ ಜೊತೆ ಇರುವ ಸುಳಿವನ್ನ ಅರಿತ ಬೀರೂರು ಪಿಎಸ್ಐ ವಿಶ್ವನಾಥ್ ನೇತೃತ್ವದ ತಂಡ, ಜೂನ್ 5ರಂದು ಇಬ್ಬರನ್ನ ಅರೆಸ್ಟ್ ಮಾಡಿಕೊಂಡು ಚಿಕ್ಕಮಗಳೂರಿಗೆ ವಾಪಸ್ಸಾಗಿದ್ದಾರೆ. ಈ ಕೃತ್ಯದ ಸೂತ್ರಧಾರ ಭರತ್ ಕುಮಾರ್, ಶಕುಂತಲಮಣಿ ಯನ್ನು ಬೀರೂರು ಪೊಲೀಸರು ಬಂಧಿಸಿ ಸದ್ಯ ಜೈಲಿಗಟ್ಟಿದ್ದಾರೆ.
4 ವರ್ಷದ ಹಿಂದೆ ಕಡೂರು ತಾಲೂಕಿನ ದೊಡ್ಡಬೋಕಿಕೆರೆ ಗ್ರಾಮದ ರಾಜೇಶ್ ಎಂಬುವವರನ್ನ ಮದುವೆಯಾಗಿದ್ದ 28 ವರ್ಷದ ಶಕುಂತಲಮಣಿಗೆ ಇದಕ್ಕೂ ಮುಂಚೆ ಶಕುಂತಲಮಣಿಗೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರದ ವ್ಯಕ್ತಿಯೊಬ್ಬರ ಜೊತೆ ವಿವಾಹವಾಗಿತ್ತು. ಆದರೆ ಆ ವ್ಯಕ್ತಿಯಿಂದ ವಿಚ್ಛೇದನ ಪಡೆದುಕೊಂಡ ಶಕುಂತಲಮಣಿ, ಆ ಬಳಿಕ ರಾಜೇಶ್ ರನ್ನ ವರಿಸಿದ್ದಳು. ಎರಡನೇ ಮದ್ವೆಯಾದ್ರೂ ತನ್ನ ಚಾಳಿ ಬಿಡದ ಈಕೆ ತನ್ನ ಹಳೇ ಲವ್ವರ್ ಭರತ್ ಕುಮಾರ್ ಜೊತೆ ಸಂಪರ್ಕ ಇಟ್ಟುಕೊಂಡಿದ್ದಳು.
ಪ್ರಿಯಕರನ ಜತೆ ಸೇರಿ ಗಂಡನ ಮನೆಗೇ ಕನ್ನ ಹಾಕಿದ ಗೃಹಿಣಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.