ಚಿಕ್ಕಮಗಳೂರು: ಅನುಮತಿ ಇಲ್ಲದೆ ಮುಸ್ಲಿಮರು ದರ್ಗಾ ನವೀಕರಣಕ್ಕೆ ಮುಂದಾದ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ಇಂದು ನಗರದ ಕೋಟೆ ಬಡಾವಣೆಯಲ್ಲಿ ನಡೆಯಿತು.
ಅರಳಿ ಮರದ ಸಮೀಪ ಇರುವ ದರ್ಗಾದ ಬಳಿ ಶೆಡ್, ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ ಎನ್ನುವ ಸುದ್ದಿ ತಿಳಿದ ಕೂಡಲೇ ಸ್ಥಳೀಯರು ಸೇರಿ ಹಿಂದೂ ಸಂಘಟ ನೆಗಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಪ್ರತಿರೋಧ ವ್ಯಕ್ತಪಡಿಸಿದರು.
೧೯೯೮ ರಿಂದಲೂ ಈ ಜಾಗ ವಿವಾದದಲ್ಲಿದೆ. ಇಲ್ಲಿ ಉರೂಸ್ ಆಚ ರಣೆ ಬಿಟ್ಟರೆ ಬೇರಾವ ಕಾರ್ಯ ಕ್ರಮಕ್ಕೂ ಅವಕಾಶ ನೀಡುವಂತಿಲ್ಲ. ಈಗ ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಪಡೆಯದೆ ನವೀಕರಣ ಮಾಡಲಾಗುತ್ತಿದೆ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು.
ಸ್ಥಳದಲ್ಲಿ ಎರಡೂ ಕಡೆಯವರು ಸೇರಿ ಬಿಗುವಿನ ಪರಿಸ್ಥಿತಿ ನಿರ್ಮಾಣ ವಾಗುತ್ತಿ ದ್ದಂತೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಮುಖ್ಯಾ ಧಿಕಾರಿ ಕೃಷ್ಣಮೂರ್ತಿ ಮತ್ತು ಸಿಬ್ಬಂಧಿ ಸ್ಥಳಕ್ಕೆ ಧಾವಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಿ ಮಧ್ಯಾಹ್ನ ನಗರಸಭೆ ಅಧ್ಯಕ್ಷರ ನೇತೃತ್ವ ದಲ್ಲಿ ಸಭೆ ನಡೆಸುವುದಾಗಿ ತಿಳಿಸಿದರು.
ನಗರಸಭೆ ಅಧ್ಯಕ್ಷ ವರಸಿದ್ದಿ ವೇಣು ಗೋಪಾಲ್ ಮತ್ತು ಸರ್ವೇ ಇಲಾಖೆ ಅಧಿಕಾರಿಗಳು ಆಗಮಿಸಿ ದರು. ಈ ವೇಳೆ ಕೆಲವರು ಪೊಲೀಸ ರೊಂದಿಗೂ ವಾಗ್ವಾದ ನಡೆಸಿದರು. ಮಧ್ಯಾಹ್ನ ನಗರಸಭೆ ಅಧ್ಯಕ್ಷರು, ಪೊಲೀಸ್ ಅಧಿಕಾರಿಗಳ ಸಮ್ಮುಖ ದಲ್ಲಿ ಎರಡೂ ಕಡೆಯವರ ಸಭೆ ನಡೆಸಲಾಯಿತು. ಈ ವೇಳೆ ಕೆಲವರು ಗೂಂಡಾಗಿರಿ ಪದ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿ ಗೊಂದಲ ನಿರ್ಮಾಣವಾ ಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.
ಅಲ್ಲಿ ಹೊಸದಾಗಿ ಯಾವುದೇ ನಿರ್ಮಾಣ ಕಾರ್ಯಕ್ಕೆ ಅವಕಾಶ ವಿಲ್ಲ. ಯಥಾಸ್ಥಿತಿ ಕಾಪಾಡಿಕೊಳ್ಳ ಬೇಕು. ಈಗ ಟೈಲ್ಸ್ಗಳನ್ನು ಅಳ ವಡಿಸಲಾಗುತ್ತಿದೆ. ಇನ್ನು ಮುಂದೆ ಇಂತ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹಿಂದೂಪರ ಮುಖಂಡರು ಹೇಳಿದರು.
ಅಂತಿಮವಾಗಿ ನಗರಸಭೆ ಅನುಮತಿ ಪಡೆಯದೆ ನವೀಕರಣ ಕಾರ್ಯಕ್ಕೆ ಮುಂದಾಗಿದ್ದು ತಪ್ಪು, ನಗರಸಭೆಯಲ್ಲಿ ಜಾಗಕ್ಕೆ ಸಂಬಂದಿಸಿದ ದಾಖಲೆಗಳಿವೆ, ನಿಮ್ಮ ಬಳಿ ಇರುವ ದಾಖಲೆಗಳನ್ನೂ ತರಬೇಕು. ಸಧ್ಯಕ್ಕೆ ಯಾವುದೇ ನಿರ್ಮಾಣ ಕಾಮಗಾರಿಗಳನ್ನು ಅಲ್ಲಿ ನಡೆಸಬಾರದು ಎಂದು ನಗರಸಭೆ ಅಧ್ಯಕ್ಷರು ಸೂಚಿಸಿದರು. ಇದನ್ನೂ ಮೀರಿ ಅಂತಹ ಚಟುವಟಿಕೆಗಳು ನಡೆದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗು ವುದು ಎಂದು ತಿಳಿಸಿದರು.
ಸಭೆಯಲ್ಲಿ ನಗರಸಭೆ ಆಯುಕ್ತ ಉಮೇಶ್, ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಕೃಷ್ಣಮೂರ್ತಿ, ಡಿವೈ ಎಸ್ಪಿ ಪುರುಷೋತ್ತಮ್, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಉಪಾಧ್ಯಕ್ಷ ಯೋಗೀಶ್ ರಾಜ್ ಅರ ಸ್, ಬಜರಂಗದಳ ನಗರ ಸಂಚಾಲಕ ಶ್ಯಾಂ ವಿ.ಗೌಡ, ನಗರಸಭೆ ಸದಸ್ಯ ಮಧುಕುಮಾರ ರಾಜ್ ಅರಸ್, ಮುಸ್ಲಿಂ ಸಂಘಟನೆ ವತಿಯಿಂದ ಕಾಲೂಬ, ಜಂಶೀದ್ ಇನ್ನಿತರರು ಇದ್ದರು.