ಚಿಕ್ಕಮಗಳೂರು: ದೇಶದಾದ್ಯಂತ ಆಮ್ಆದ್ಮಿ ಪಕ್ಷ ಬೆಳೆಯುತ್ತಿರುವುದನ್ನು ಕಂಡು ಭಯಗೊಂಡಿರುವ ಬಿಜೆಪಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ಸಿ ಸೋಡಿಯಾ ಅವರನ್ನು ಬಂಧಿಸಿದೆ ಎಂದು ಎಎಪಿ ಜಿಲ್ಲಾಧ್ಯಕ್ಷ ಹೇಮಂ ತ್ಕುಮಾರ್ ಆರೋಪಿಸಿದರು.
ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ದೆಹಲಿಯ ಅಬಕಾರಿ ನೀತಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ನೂತನ ನೀತಿಯನ್ನೂ ಇನ್ನೂ ಜಾರಿಗೆ ತಂದಿಲ್ಲ. ಹಲವು ರಾಜ್ಯಗ ಳಲ್ಲಿ ಈ ನೀತಿಯೇ ಇದೆ. ಸುಮಾರು ಒಂದು ವರ್ಷ ಕಾಲ ಕೇಂದ್ರದ ತನಿಖಾಧಿಕಾರಿಗಳು ಸಿಸೋಡಿಯ ಅವರನ್ನು ಗುರಿಯಾಗಿಸಿ ಕೊಂಡು ದಾಳಿ ಮಾಡುತ್ತಿದ್ದರು. ಆದರೆ, ಆರೋಪ ಸಾಬೀತುಪಡಿಸುವಂತ ಯಾವುದೇ ಸಾಕ್ಷಿ ದೊರೆತಿಲ್ಲ. ನಗದು ಅಥವಾ ಯಾವುದೇ ಅಕ್ರಮ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ನಮ್ಮನ್ನು ಮಣಿಸಲು ಆಮ್ ಆದ್ಮಿ ಒಂದೇ ಏಕೈಕ ಶಕ್ತಿ ಎಂದು ಅರಿತಿ ರುವ ಬಿಜೆಪಿ ನಮ್ಮನ್ನು ರಾಜಕೀಯ ವಾಗಿ ಎದುರಿಸಲು ಸಾಧ್ಯವಾಗದೆ ಅಧಿಕಾರ ದುರ್ಬಳಕೆ ಮಾಡಿಕೊ ಂಡು ಈ ರೀತಿ ತೊಂದರೆ ಕೊಡುತ್ತಿ ದ್ದಾರೆ ಎಂದು ಆರೋಪಿಸಿದರು.
ಎಎಪಿ ರಾಜ್ಯ ಜಂಟಿ ಕಾರ್ಯ ದರ್ಶಿ ಡಾ.ಸುಂದರಗೌಡ ಮಾತ ನಾಡಿ, ಸತ್ಯ, ನ್ಯಾಯ, ಧರ್ಮವನ್ನು ಮೆಟ್ಟಿ ನಿಲ್ಲುವ ಯಾವುದೇ ಪಕ್ಷಗಳು ಸರ್ವನಾಶವಾಗುತ್ತವೆ. ನ್ಯಾಯಕ್ಕಾಗಿ ನಮ್ಮ ಹೋರಾಟ ನಿರಂತರ. ಅನ್ಯಾ ಯದ ರಾಜಕಾರಣವನ್ನು ಜನ ಎಂ ದಿಗೂ ಸಹಿಸಿಕೊಳ್ಳುವುದಿಲ್ಲ. ಬಿಜೆ ಪಿಗೆ ಮರ್ಯಾದೆ ಒದ್ದರೆ ಸಿಸೋಡಿ ಯಾ ಅವರನ್ನು ನಾಳೆಯೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಅಭ್ಯರ್ಥಿ ಆಕಾಂಕ್ಷಿ ಎಂ.ಪಿ. ಈರೇಗೌಡ ಮಾತನಾಡಿ ಶಿಕ್ಷಣ ಸಚಿವರೂ ಆಗಿರುವ ಸಿಸೋಡಿಯಾ ಅವರು ಕರ್ನಾಟಕದ ದಾವಣಗೆರೆ ಯಲ್ಲಿ ಮಾ.೪ ರಂದು ನಡೆಯುವ ಎಎಪಿ ಸಮಾವೇಶಕ್ಕೆ ಆಗಮಿಸಲಿದ್ದು ಇಲ್ಲಿನ ಶಿಕ್ಷಣವ್ಯವಸ್ಥೆಯ ದುಸ್ಥಿತಿಯ ಬಗ್ಗೆ ಪ್ರಶ್ನಿಸಬಹುದು ಎಂಬ ಕಾರ ಣಕ್ಕೆ ಬಿಜೆಪಿ ಸಿಬಿಐ ಮೂಲಕ ಅವ ರನ್ನು ಬಂಧಿಸಿದೆ. ಇದು ಖಂಡನೀ ಯ ಎಂದರು. ಎಎಪಿ ಮುಖಂಡರಾದ ಜಮೀಲ್ ಅಹ್ಮದ್, ಅಂತೋಣಿ, ಸಲ್ಮಾನ್ ಮತ್ತಿತರರಿದ್ದರು.