ಚಿಕ್ಕಮಗಳೂರು: ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಸಂಪರ್ಕ ಸೇತುವೆ ಚಾರ್ಮಾಡಿ ಘಾಟಿಯ ರಸ್ತೆಯಲ್ಲಿ ಇರುವ ಅಣ್ಣಪ್ಪ ಸ್ವಾಮಿ ದೇಗುಲದಲ್ಲಿ ನಿತ್ಯ ಶಾಸ್ತ್ರೋಕ್ತ ಪೂಜೆ ನಡೆಯಲಿ ಎಂದು ಸ್ಥಳೀಯರ ಆಗ್ರಹಿಸಿದ್ದಾರೆ. ಐತಿಹಾಸಿಕ ಹಾಗೂ ಇತಿಹಾಸ ಪ್ರಸಿದ್ಧ ಅಣ್ಣಪ್ಪ ಸ್ವಾಮಿ ದೇವಾಲಯದಲ್ಲಿ ನಿತ್ಯ ವೇದ-ಮಂತ್ರಗಳಿಂದ ಪೂಜೆ ಆಗಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.
ಮೂಲಭೂತ ಸೌಕರ್ಯಗಳ ಜೊತೆಗೆ ನಿತ್ಯ ಪೂಜೆಗೆ ಆಗ್ರಹ:
ಸರ್ಕಾರ, ಮುಜರಾಯಿ ತಹಶೀಲ್ದಾರ್ ಹಾಗೂ ಎಸಿ ಅವರಿಗೆ ಆಗ್ರಹಿಸಿರೋ ಸ್ಥಳಿಯರು ಚಾರ್ಮಾಡಿಯ ಅಣ್ಣಪ್ಪ ಸ್ವಾಮಿ ದೇಗುದಲ್ಲಿ ನಿತ್ಯ ಪೂಜೆ ನಡೆಯುತ್ತಿದೆ. ಆದರೆ, ವೇದ-ಮಂತ್ರಗಳಿಂದ ಪೂಜೆ ನಡೆಯುತ್ತಿಲ್ಲ. ಇನ್ಮು ಮುಂದೆ ಸರ್ಕಾರ ಹಾಗೂ ಅಧಿಕಾರಿಗಳು ವೇದ ಹಾಗೂ ಮಂತ್ರಗಳಿಂದ ಪೂಜೆಯಾಗುವಂತೆ ನೋಡಿಕೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇಗುಲ ಅಂದ್ರೆ ಈ ಭಾಗದಲ್ಲಿ ಓಡಾಡುವ ಪ್ರವಾಸಿಗರಿಗೆ ಭಕ್ತಿ-ಭಯ ಹಾಗೂ ಗೌರವ. ಈ ಭಾಗದಲ್ಲಿ ಸಂಚರಿಸುವ ಅನ್ಯಕೋಮಿನ ವಾಹನಹಳನ್ನು ಹೊರತು ಪಡಿಸಿ ಪ್ರತಿಯೊಂದು ವಾಹನಗಳು ನಿತ್ಯ ಇಲ್ಲಿ ಸಂಚರಿಸುವಾಗ ಇಲ್ಲಿ ನಿಲ್ಲಿಸಿ, ಪೂಜೆ ಸಲ್ಲಿಸಿ, ಕಾಣಿಕೆ ಹಾಕಿಯೇ ಮುಂದೆ ಹೋಗುವುದು. ಇಲ್ಲಿ ಕೈಮುಗಿದು, ಪೂಜೆ ಮಾಡಿಸಿ ಕೊಂಡು ಮುಂದೆ ಹೋದರೆ ಚಾರ್ಮಾಡಿ ಘಾಟಿಯಂತಹ ಅಪಾಯಕಾರಿ ರಸ್ತೆಯಲ್ಲಿ ಯಾವ ಅನಾಹುತವೂ ಸಂಭವಿ ಸೋದಿಲ್ಲ ಅನ್ನೋದು ಈ ಭಾಗದ ಪ್ರಯಾ ಣಿಕರ ನಂಬಿಕೆ. ಹಾಗಾಗಿ, ಈ ಭಾಗದಲ್ಲಿ ಸಂಚಾರ ಮಾಡುವ ಪ್ರತಿಯೊಂದು ವಾಹನ ಸವಾರರು ಇಲ್ಲಿ ನಿಲ್ಲಿಸಿ ಪೂಜೆ ಮಾಡಿಸಿ, ಕೈ ಮುಗಿದು, ಕಾಣಿಕೆ ಹಾಕಿಯೇ ಮುಂದೆ ಹೋಗುತ್ತಾರೆ.
ನಿತ್ಯ ಸಂಚರಿಸುವ ಕೆ.ಎಸ್.ಆರ್.ಟಿ.ಸಿ. ಬಸ್ಗಳು ಕೂಡ ಚಾಲಕರೂ ಇಲ್ಲಿ ಕೈಮುಗಿದು ನಂತರ ತೆರಳುತ್ತಾರೆ. ಆದರೆ, ಮುಜರಾಯಿ ಇಲಾಖೆಗೆ ಒಳಪಡುವ ಈ ದೇಗುಲಕ್ಕೆ ನಿತ್ಯ ಸಾವಿರಾರು ರೂಪಾಯಿ ಆದಾಯವಿದೆ. ಆದರೆ, ಇಲ್ಲಿ ನಿತ್ಯ ಪೂಜೆ ನಡೆದರೂ ಕೂಡ ಮಾಮೂಲಿ ಪೂಜೆಯಂತೆ ನಡೆಯುತ್ತಿದೆ. ಇದೊಂದು ಐತಿ ಹಾಸಿಕ ಹಾಗೂ ಇತಿಹಾಸ ಪ್ರಸಿದ್ಧ ದೇವಾ ಲಯ. ಈ ಅಣ್ಣಪ್ಪಸ್ವಾಮಿಗೂ ಧರ್ಮ ಸ್ಥಳದ ಮಂಜುನಾಥ ಸ್ವಾಮಿಗೂ ಸಂಬಂಧ ವಿದೆ ಎಂಬ ಮಾತುಗಳು ಇವೆ. ಈ ಅಣ್ಣಪ್ಪ ಸ್ವಾಮಿ ಅತ್ಯಂತ ಶಕ್ತಿಶಾಲಿ ದೈವ ಕೂಡ. ಹಾಗಾಗಿ, ಇಲ್ಲಿಗೆ ನಿತ್ಯ ಬರುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳ ಜೊತೆಗೆ ವೇದಮಂತ್ರ ಘೋಷಗಳೊಂದಿಗೆ ನಿತ್ಯ ಪೂಜೆ ನಡೆಯಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.