ಬೀರೂರು: ದೇಶದಲ್ಲಿ ಮೋದಿಯವರ ಖಡಕ್ ಆಡಳಿತ, ಅಭಿವೃದ್ದಿ ಮತ್ತು ಬಡಜನರ ಪರ ನೀಡಿದ್ದ ವಿವಿಧ ಯೋಜನೆಗಳಿಗೆ ಯುವಜನಾಂಗ ಬಿಜೆಪಿ ಬೆಂಬಲಿಸಲಿದ್ದು, ಜಾತಿ ಮತ ಬೇಧವೆನ್ನದೆಜನ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಲಿದ್ದು ಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂದು ಉತ್ತರ ಪ್ರದೇಶದ ಸಹಕಾರ ಸಚಿವ ಸಂಜೀವ್ಗೋಯಲ್ (ಸಿಕ್ಕ) ಹೇಳಿದರು.
ಅವರು ಪಟ್ಟಣದ ಕೋದಂಡಸ್ವಾಮಿ ದೇವಾಯಲ ರಸ್ತೆಯ ಸವಿತಾ ಸಮಾಜ ಭಾಂದವರೊಂದಿಗೆ ಬಿಜೆಪಿ ಅಭ್ಯರ್ಥಿ ಬೆಳ್ಳಿಪ್ರಕಾಶ್ ಪರ ಮತಯಾಚನೆ ಮಾಡಿ ಮಾತನಾಡಿದರು.
ದೇಶದಲ್ಲಿ ಜನ ಬೇಸತ್ತು ಕಾಂಗ್ರೆಸ್ ಪಕ್ಷವನ್ನು ಈಗಾಗಲೇ ಧೂಳಿಪಟಮಾಡಿದ್ದು, ನಮ್ಮ ಎದುರು ಚುನಾವಣೆಯನ್ನು ಎದುರಿಸುತ್ತಿರುವುದು ಜೆಡಿಎಸ್ ಮಾತ್ರ. ಸ್ವಾತಂತ್ರ ಸಿಗುವುದಕ್ಕಿಂತ ೭೫೫ಮುಂಚೆ ಬ್ರೀಟಿಷರ ಗುಲಾಮರಾಗಿದ್ದೆವು, ಸ್ವಾತಂತ್ರ ನಂತರ ಕಾಂಗ್ರೆಸ್ ಸಾಧನೆ ಏನು?ಎಷ್ಟು ಜನ ಬಲಿಧಾನ ಅಡಗಿದೆ ಎಂದು ತಿಳಿಯಿರಿ.
ನಾನು ನಿಮ್ಮಲ್ಲಿ ಮತ ಕೇಳಲು ಬಂದಿಲ್ಲ. ನೀವೆಲ್ಲ ನಮ್ಮ ಬಿಜೆಪಿ ಪಕ್ಷದ ಪ್ರಚಾರಕರು, ದೇಶದಲ್ಲಿ ಮೋದಿ ಆಡಳಿತ ಬಾರದಿದ್ದರೆ ಇಲ್ಲಿನ ಸ್ಥಿತಿ ಏನಾಗುತ್ತಿತ್ತು, ಧರ್ಮ ಉಳಿಯಬೇಕಾದರೆ ಬಿಜೆಪಿಗೆ ಮತ ಹಾಕಿ. ಶ್ರೀರಾಮ ವನವಾಸದಲ್ಲಿ ಸೀತಾಮಾತೆಗೆ ಹನುಮ ಮತ್ತು ಜಾಂಬುವಂತ ಹೇಗೆ ರಕ್ಷಣೆಗೆ ನಿಂತರೋ ಹಾಗೆ ನೀವು ನಿಲ್ಲಬೇಕು. ದೇಶದ ಸುಭದ್ರತೆ ಮತ್ತು ಉತ್ತಮ ಆಡಳಿತಕ್ಕೆ ಮೋದಿ ಸರ್ಕಾರ ಬೇಕೆ ಬೇಕು ಎಂದರು.
ಕಡೂರು ವಿಧಾನ ಸಭಾ ಕ್ಷೇತ್ರದಲ್ಲಿ ಬೆಳ್ಳಿಪ್ರಕಾಶ್ ,ಉತ್ತಮ ಕೆಲಸ ಕಾರ್ಯಗಳ ಮೂಲಕ ಜನರ ಮನೆ ಮಾತಾಗಿದ್ದಾರೆ. ಅವರ ಅಭಿವೃದ್ದಿ ಕೆಲಸಗಳೆ ಅವರನ್ನು ಗೆಲುವಿನತ್ತ ಕೊಂಡೊಯ್ಯಲಿದೆ. ಆದರೆ ಅದಕ್ಕು ಸಹ ಕಾರ್ಯಕರ್ತರ ಶ್ರಮ ಮುಖ್ಯ ಎಂದರು.
ಬಿಜೆಪಿ ಮುಖಂಡ ಮಾರ್ಗದ ಮಧು ಮಾತನಾಡಿ, ಉತ್ತರ ಪ್ರದೇಶದ ಖಡಕ್ ಮುಖ್ಯಮಂತ್ರಿ ಯೋಗಿ ಆದಿತ್ ನಾಥ್ ಸಚಿವ ಸಂಪುಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಚಿವ ಗೊಯಲ್ರವರನ್ನು ಕಡೂರು ವಿಧಾನ ಸಭಾ ವೀಕ್ಷಕರನ್ನಾಗಿ ನೇಮಿಸಲಾಗಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಕ್ಷೇತ್ರದ ತುಂಬಾ ಪ್ರಚಾರ ನಡೆಸುತ್ತಿದ್ದಾರೆ. ಕಾರ್ಯಕರ್ತರು ಹಾಗೂ ಗ್ರಾಮಗಳ ಜನರು ಬೆಳ್ಳಿಪ್ರಕಾಶ್ ನುಡಿದಂತೆ ನಡೆದುಕೊಂಡಿದ್ದಾರೆ ಎಂಬ ಭಾವನೆ ವ್ಯಕ್ತಪಡಿಸುತ್ತಿರುವುದನ್ನು ಗಮನಿಸಿದ್ದಾರೆ.
ಜೊತೆಗೆದೇ ಶದ ಪ್ರತಿಯೊಬ್ಬ ನಾಗರೀಕರು ಸಹ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀಯರವರ ಯಾವುದಾದರೊಂದು ಯೋಜನೆಗಳ ಸಹಕಾರ ಪಡೆಯುವಲ್ಲಿ ಪಾಲುದಾರರಾಗಿದ್ದಾರೆ. ಇದನ್ನು ಮನಗಂಡು ಬೆಳ್ಳಿಪ್ರಕಾಶ್ ಗೆಲ್ಲಿಸಿ, ಸುಭದ್ರ ಸರ್ಕಾರಕ್ಕೆ ಮೋದಿಜಿಯಾದರೆ ಕಡೂರು ಕ್ಷೇತ್ರ ಅಭಿವೃದ್ದಿ ಬೆಳ್ಳಿಪ್ರಕಾಶ್ ಗೆಲ್ಲಿಸಿ ಎಂದು ಮನವಿ ಮಾಡಿದರು.
ಪುರಸಭೆ ಮಾಜಿಅಧ್ಯಕ್ಷೆ ಸವಿತಾರಮೇಶ್, ಸವಿತಾ ಸಮಾಜದ ಬೀರೂರುಅಧ್ಯಕ್ಷ ಮುರುಗೇಶ್, ಗೌರವಾಧ್ಯಕ್ಷ ಮಣಿ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಗ್ಯಾಸ್ ರವಿಕುಮಾರ್, ಶಬರೀಶ್ , ಸವಿತಾ ಸಮಾಜದ ಕಡೂರು ಅಧ್ಯಕ್ಷ ಪರಮೇಶ್, ಗಣೇಶ್, ಮಂಜುನಾಥ್, ಓಂಕಾರ್, ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.