News Karnataka Kannada
Wednesday, May 08 2024
ಚಿಕಮಗಳೂರು

ದತ್ತಪೀಠದ ಸುತ್ತಮುತ್ತ ಇರುವ ಅನಧಿಕೃತ ಗೋರಿ ಸ್ಥಳಾಂತರಕ್ಕೆ ಒತ್ತಾಯ

Datta Peeta
Photo Credit :

ಚಿಕ್ಕಮಗಳೂರು: ದತ್ತಪೀಠದ ಸುತ್ತಮುತ್ತ ಇರುವ ಅನಧಿಕೃತ ಗೋರಿಗಳನ್ನು ಸ್ಥಳಾಂತರ ಮಾಡುವಂತೆ ಜಿಲ್ಲಾ ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಪಕ್ಷದ ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್ ತಿಳಿಸಿದ್ದಾರೆ.

ದತ್ತಪೀಠದಲ್ಲಿ ಹಿಂದುಗಳೇ ಪೂಜೆ ಮಾಡಬೇಕು ಮತ್ತು ಅಲ್ಲಿನ ಗೋರಿಗಳನ್ನು ಪಕ್ಕದ ನಾಗೇನಹಳ್ಳಿಗೆ ಸ್ಥಳಾಂತರ ಮಾಡಬೇಕು ಎಂದು ಸಚಿವ ಸುನಿಲ್ ಕುಮಾರ್ ಆಗ್ರಹಿಸಿರುವುದು ಸ್ವಾಗತಾರ್ಹವಾಗಿದ್ದು, ಕಾಂಗ್ರೆಸ್ ಪಕ್ಷ ಇದನ್ನು ವಿರೋಧಿಸುವ ಮೂಲಕ ನಾವು ಎಂದಿಗೂ ಹಿಂದೂ ವಿರೋಧಿಗಳು ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ ಎಂದಿದ್ದಾರೆ.

ಆ ಪ್ರದೇಶದಲ್ಲಿ ಯಾವುದೇ ಅಧಿಕೃತವಾದ ಗೋರಿಗಳಿಲ್ಲವೆಂದು ಕಾಂಗ್ರೆಸ್ಸಿನವರಿಗೂ ಗೊತ್ತು ಹಾಗೂ ಒಂದು ಕೋಮಿನ ಮುಖಂಡರಿಗೂ ಆ ವಿಚಾರ ತಿಳಿದಿದೆ. ಆದರೂ ಅದರ ಬಗ್ಗೆ ಸುಳ್ಳು ದಾಖಲೆಯನ್ನು ಸೃಷ್ಠಿ ಮಾಡಿ ಕೋರ್ಟ್ ಮೆಟ್ಟಿಲೇರಿತ್ತು. ಯಾವುದಾದರೂ ದಾಖಲೆಗಳಿದ್ದರೆ ಅದು ದತ್ತಪೀಠದ ಹೆಸರಿನಲ್ಲಿ ಮಾತ್ರ ಎಂದು ಹೇಳಿದ್ದಾರೆ.

ಎಲ್ಲಾ ಕಂದಾಯ ಮತ್ತು ಸರ್ಕಾರಿ ದಾಖಲೆಗಳ ಪ್ರಕಾರ ಇನಾಂ ದತ್ತಾತ್ರೇಯ ಪೀಠ ಎಂದೇ ಇದ್ದು ಪಕ್ಕದ ನಾಗೇನಹಳ್ಳಿಯ ಸರ್ವೇ ನಂಬರ್ ೫೭ರಲ್ಲಿ ಬಾಬಾಬುಡನ್ ದರ್ಗಾ ಇರುವುದು ಎಲ್ಲಾ ನ್ಯಾಯಾಲಯಗಳಲ್ಲೂ ಈಗಾಗಲೇ ಸಾಬೀತಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚಿಸಿದ್ದ ನಾಗಮೋಹನ್ ದಾಸ್ ನೇತೃತ್ವದ ಹಿಂದೂ ವಿರೋಧಿ ಸಮಿತಿ ನೀಡಿದ್ದ ವರದಿಯಂತೆ ಮುಜಾವರ್ ನೇಮಕವನ್ನು ಹೈಕೋರ್ಟ್ ಈಗ ರದ್ದುಗೊಳಿಸಿ ಹಿಂದೂ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಬೇಕೆಂದು ಆದೇಶಿಸಿದೆ ಅಲ್ಲದೇ ಮುಸ್ಲಿಂ ವ್ಯಕ್ತಿಯಿಂದ ಮೂರ್ತಿ ಪೂಜೆ ಮಾಡಿಸುವುದು ಅವರ ಧರ್ಮದ ಆಚರಣೆಯನ್ನು ಉಲ್ಲಂಘನೆ ಮಾಡಿದಂತೆ ಎಂದು ತಿಳಿಸಿದ್ದಾರೆ.

ಈ ಎಲ್ಲಾ ಕಾರಣದಿಂದ ಸಚಿವ ಸುನಿಲ್ ಕುಮಾರ್ ಇಲ್ಲಿರುವ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿದ್ದಾರೆ. ದತ್ತಾತ್ರೇಯ ಮತ್ತು ಅನಸೂಯ ದೇವಿಗೆ ಪೀಠದ ಸ್ಥಳದಲ್ಲಿ ಮಾಂಸಹಾರದ ಮೂಲಕ ಅಪಮಾನ ಮಾಡಿದ್ದು ಸಾಕು. ಕಾಂಗ್ರೆಸಿಗರು ದತ್ತಪೀಠದ ವಿರುದ್ಧ ಹೇಳಿಕೆ ಕೊಡಿಸುತ್ತ ಜಿಲ್ಲೆಯಲ್ಲಿ ಮತ್ತೆ ಶಾಂತಿ ಕದಡಲು ಯತ್ನಿಸುತ್ತಿರುವುದು ನಾಚಿಕೆಗೇಡು, ಇತಿಹಾಸದ ಪಾವಿತ್ರತೆ ಕಾಪಾಡಲು ಹಿಂದುಗಳಿಗೆ ಸಂಪೂರ್ಣ ಪೀಠವನ್ನು ಹಸ್ತಾಂತರಿಸಲು ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಸಹಕರಿಸಬೇಕೆಂದು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು