ಚಿಕ್ಕಮಗಳೂರು: ದತ್ತಪಠದಲ್ಲಿ ಆದಷ್ಟು ಬೇಗನೇ ವರ್ಷದ 365 ದಿನವೂ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ಸಿಗಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.
ದತ್ತಪೀಠದ ವಿಚಾರದಲ್ಲಿ ಹಲವಾರು ವರ್ಷಗಳ ಹೋರಾಟ ಮಾಡಿದ್ದೇವೆ. ಪ್ರಕರಣ ಸುಪ್ರೀಂ ಕೋರ್ಟ್ ವರೆಗೂ ಹೋಗಿ ವಾಪಸ್ ಬಂದಿದೆ. ಹೈಕೋರ್ಟ್ ತೀರ್ಪಿನ ಅನ್ವಯ ರಾಜ್ಯ ಸರ್ಕಾರ ಈಗ ಮೂರು ಮಂದಿ ಸಚಿವರ ಸಮಿತಿಯನ್ನು ರಚಿಸಿದೆ ಎಂದರು.
ತಕ್ಷಣ ಹಿಂದೂ ಅರ್ಚಕರನ್ನು ನೇಮಿಸಿ ಪೂಜಾ ಕೈಂಕರ್ಯಗಳನ್ನು ನಡೆಸಬೇಕು. ವರ್ಷ ಪೂರ್ತಿ ಹಿಂದೂಗಳಿಗೆ ಅಲ್ಲಿ ದತ್ತಪಾದುಕೆಗಳ ದರ್ಶನ ಸಿಗಬೇಕು. ಈ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ ಖಂಡಿತ ಪ್ರಯತ್ನ ಮಾಡಲಿದೆ ಎಂದು ತಿಳಿಸಿದರು.