ಕಾರವಾರ: ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ಕಸ್ಟಮ್ ಅಧಿಕಾರಿ ಎಂದು ಸುಳ್ಳು ಹೇಳಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದ ಕಲಘಾರ ವ್ಯಕ್ತಿ ಹಾಲಿ ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿ ನಿವಾಸಿ ಮನೋಜ ನರಸಿಂಹ ಪೂಜಾರಿ ಆರೋಪಿಯಾಗಿದ್ದಾನೆ.
ಹುಬ್ಬಳ್ಳಿ ಕಸ್ಟಮ ವಿಭಾಗದಲ್ಲಿ ಕರ್ತವ್ಯದಲ್ಲಿ ಇರುವುದಾಗಿ ಸುಳ್ಳು ಹೇಳಿ ದೂರುದಾರ ಹಾಗೂ ಆತನ ಗೆಳೆಯರಿಂದ ಸರಕಾರಿ ಉದ್ಯೋಗ ಗೊಳಿಸುವುದಾಗಿ ನಂಬಿಸಿ ಸುಮಾರು 7,70,000 ರೂ. ಪಡೆದು ಮೋಸ ಮಾಡಿದ್ದನು. ಆರೋಪಿ ಮನೋಜ್ ನರಸಿಂಹ ಪೂಜಾರಿಯನ್ನು ಕುಂದಾಪುರದಲ್ಲಿ ವಶಕ್ಕೆ ಪಡೆಯಲಾಗಿದೆ. ಶಿರಸಿ ತಾಲೂಕಿನ ಆರೆಕೊಪ್ಪದ ವಿನಾಯಕ ಹೆಗಡೆ ದೂರು ನೀಡಿದ್ದರು.