ಕಾರವಾರ: ಭೈರುಂಬೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ಶಿರಸಿ- ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 94.53 ಲಕ್ಷ ರೂ. ಮೌಲ್ಯದ ಮದ್ಯವನ್ನು ಅಬಕಾರಿ ಅಧಿಕಾರಿಗಳು ಜಪ್ತಿಪಡಿಸಿಕೊಂಡ ಘಟನೆ ಶಿರಸಿಯಲ್ಲಿ ನಡೆದಿದೆ.
ಲಾರಿ ಚಾಲಕ, ಕೇರಳ ಮೂಲದ ಮುಹಮ್ಮದ ನಿಟ್ಟೂಕರನ್ನ್ನು ವಶಕ್ಕೆ ಪಡೆಯಲಾಗಿದ್ದು, ಮದ್ಯವನ್ನು ಗೋವಾದಿಂದ ಕೇರಳಕ್ಕೆ ಸಾಗಿಸುತ್ತಿದ್ದನು. ಜೊತೆಗೆ ಅನಧಿಕೃತವಾಗಿ 3.04 ಲಕ್ಷ ಮೌಲ್ಯದ 5250 ಲೀ. ರೆಕ್ಟಿಫೈಡ್ ಸ್ಪಿರಿಟ್ ಸಾಗಿಸುತ್ತಿದ್ದನು.
ಮಂಗಳೂರು ವಿಭಾಗದ ಜಾರಿ ಮತ್ತು ತನಿಖೆಯ ಅಬಕಾರಿ ಜಂಟಿ ಆಯುಕ್ತ ಟಿ.ನಾಗರಾಜಪ್ಪ, ಮಾರ್ಗದರ್ಶನದಲ್ಲಿ ಜಿಲ್ಲಾ ಉಪ ಆಯುಕ್ತೆ ವನಜಾಕ್ಷಿ ಎಮ್. ನಿರ್ದೇಶನದಂತೆ ನಡೆದ ಈ ದಾಳಿಯ ನೇತೃತ್ವವನ್ನು ಉಪ ಅಧೀಕ್ಷ ಎಚ್.ಎಸ್.ಶಿವಪ್ಪ ವಹಿಸಿದ್ದರು.
ನಿರೀಕ್ಷಕ ಮಹೇಂದ್ರ ಎಸ್.ನಾಯ್ಕ ಮೊಕದ್ದಮೆ ದಾಖಲಿಸಿಕೊಂಡಿದ್ದು, ದಾಳಿಯಲ್ಲಿ ಸಿಬ್ಬಂದಿ ನಿತ್ಯಾನಂದ ಕೆ.ವೈದ್ಯ, ಕಾನ್ಸ್ಟೇಬಲ್ಗಳಾದ ಗಜಾನನ ಎಸ್.ನಾಯ್ಕ, ಈರಣ್ಣ ಜಿ.ಗಾಳಿ ಮತ್ತು ಅಬ್ದುಲ್ ಮಕಾನ್ದಾರ ಪಾಲ್ಗೊಂಡಿದ್ದರು.