News Karnataka Kannada
Tuesday, May 07 2024
ಉತ್ತರಕನ್ನಡ

ತೂಗು ಸೇತುವೆ ನಿರ್ಮಿಸಿ ಗ್ರಾಮಸ್ಥರಿಗೆ ನೆರವಾದ ‘ಶೌರ್ಯ’ ತಂಡ

'Shaurya' team helps villagers by constructing suspension bridge
Photo Credit : News Kannada

ಕಾರವಾರ: ಶಿರಸಿ ತಾಲೂಕಿನ ಶಿಗೇಹಳ್ಳಿ ಗ್ರಾಮದ ಕೋಟೆಬೈಲಿನಲ್ಲಿ ಮುರಿದು ಬಿದ್ದ ಸುಮಾರು 50 ಅಡಿ ಉದ್ದದ ತೂಗು ಸೇತುವೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ಸದಸ್ಯರು ಯೋಜನಾಧಿಕಾರಿ ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಿ ಕೊಟ್ಟಿದ್ದಾರೆ.

ಕೋಟೆಬೈಲ್ ಗ್ರಾಮದ ಒಂದು ಕಡೆ 9 ಮನೆ ಹಾಗು ಇನ್ನೊಂದು ಕಡೆಯಲ್ಲಿ 10 ಮನೆಗಳಿದ್ದು ಇಲ್ಲಿನ ಗ್ರಾಮಸ್ಥರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ ಮಳೆಗಾಲದಲ್ಲಿ ಹೊಳೆ ಅಡ್ಡಿಯಾಗಿತ್ತು. ಇದನ್ನು ಮನಗಂಡ ಅಲ್ಲಿನ ಗ್ರಾಮಸ್ಥರು ಓಡಾಟಕ್ಕಾಗಿ ತಾವೇ ತೂಗು ಸೇತುವೆಯನ್ನು ನಿರ್ಮಿಸಿಕೊಂಡಿದ್ದರು.

ಅದು ಕಳೆದ ವರ್ಷ ಮರಿದು ಬಿದ್ದು ಅದೇ ಗ್ರಾಮದ ಮಹಿಳೆಯೋರ್ವರು ಎಂಬುವರು ಕಾಲು ಮುರಿದುಕೊಂಡಿದ್ದರು. ಇದನ್ನು ತಿಳಿದ ಶ್ರೀ.ಕ್ಷೇತ್ರ ರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ತಮ್ಮ ಶೌರ್ಯ ತಂಡದ ಸಹಾಯದಿಂದ ತೂಗು ಸೇತುವೆ ನಿರ್ಮಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದರಿಂದಾಗಿ ಅಲ್ಲಿನ ಗ್ರಾಮಸ್ಥರಿಗೆ 10 ಕಿ.ಮೀ. ದೂರ ಕಡಿಮೆಯಾದಂತಾಗಿದೆ. ಮತ್ತು ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ನಗರಕ್ಕೆ ವ್ಯವಹಾರಕ್ಕೆಂದು ಬರುವ ಗ್ರಾಮಸ್ಥರಿಗೆ ಅನುಕೂಲವಾದಂತಾಗಿದೆ. ಸೇತುವೆ ನಿರ್ಮಾಣ ಮಾಡಲು ಶೌರ್ಯ ತಂಡಕ್ಕೆ ಗ್ರಾಮಸ್ಥರು ಕೂಡಾ ಕೈ ಜೋಡಿಸಿದ್ದಾರೆ. ಸಂಯೋಜಕರಾದ ಸವಿತಾ, ಸೇವಾ ಪ್ರತಿನಿಧಿ ರಾಧಾ, ಶೌರ್ಯ ತಂಡದ ನರಸಿಂಹ, ಘಟಕ ಪ್ರತಿನಿಧಿ ಮಂಜುನಾಥ, ಆನಂದ, ನಾಗರಾಜ, ಮಮತಾ ಸೇತುವೆ ನಿರ್ಮಾಣದಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು