News Karnataka Kannada
Wednesday, May 08 2024
ಉತ್ತರಕನ್ನಡ

ಪ್ಲಾಸ್ಟಿಕ್ ಮುಕ್ತ ಜಾತ್ರೆ ಅಭಿಯಾನ: ಪರಿಸರ ಸಂರಕ್ಷಣೆಗೆ ಪಣತೊಟ್ಟ ಯುವಕರ ತಂಡ

Kund
Photo Credit : News Kannada

ಕುಂದಾಪುರ: ಮಕರ ಸಂಕ್ರಾತಿ ದಿನದಂದು ವಿಜೃಂಭಣೆಯಿಂದ ನಡೆಯುವ ಕುಂದಾಪುರ ತಾಲೂಕಿನ ಮಾರಣಕಟ್ಟೆ ಜಾತ್ರೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಮುಕ್ತಗೊಳಿಸಲು ಕ್ಲೀನ್ ತ್ರಾಸಿ – ಮರವಂತೆ ಪ್ರಾಜೆಕ್ಟ್ ತಂಡ ಪೋಸ್ಟರ್ ಅಭಿಯಾನದ ಮೂಲಕ ಜನ ಜಾಗೃತಿ ಮೂಡಿಸುವ ಮುಖೇನ ಪರಿಸರ ಕಾಳಜಿ ಮೆರೆದಿದೆ.

ಜ.14, 15, 16 ರಂದು ನೆರವೇರುವ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಜಾತ್ರೆಗೆ ಕುಂದಾಪುರ,ಬೈಂದೂರು ಮಾತ್ರವಲ್ಲದೆ ತುಳುನಾಡಿನ ವಿವಿಧ ಭಾಗಗಳಿಂದ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ.ಮೂರು ದಿನಗಳ ಕಾಲ ನಡೆಯುವ ಅದ್ಧೂರಿ ಜಾತ್ರೆಯಲ್ಲಿ ಸಾವಿರಕ್ಕೂ ಮಿಕ್ಕಿ ತಾತ್ಕಾಲಿಕ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗುತ್ತದೆ.

ಜಾತ್ರೆಯ ವ್ಯಾಪಾರದ ಸಂದರ್ಭದಲ್ಲಿ ಪ್ಲಾಸ್ಟಿಕ್ ಝುರೀ ಮತ್ತು ಲೋಟ ಇನ್ನಿತರ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಕೆ ಮಾಡಲಾಗುತ್ತದೆ ಜನ ಜಂಗುಳಿ ತುಂಬಿದ ಜಾತ್ರೆಯಲ್ಲಿ ಲೋಡುಗಟ್ಟಲೇ ನಿರೂಪಯುಕ್ತ ಕಸ ಉತ್ಪತಿಯಾಗುತ್ತದೆ.

ಜಾತ್ರೆಗಳಲ್ಲಿ ಬಳಕೆಯಾಗುತ್ತಿರುವ ಏಕ ಬಳಕೆಯ ಪ್ಲಾಸ್ಟಿಕ್‍ಗೆ ಕಡಿವಾಣ ಹಾಕುವ ಉದ್ದೇಶದಿಂದ ಕ್ಲೀನ್ ತ್ರಾಸಿ-ಮರವಂತೆ ಪ್ರಾಜೆಕ್ಟ್ ಯುವಕರ ತಂಡ ಜನ ಜಾಗೃತಿ ಮೂಲಕ ಪ್ಲಾಸ್ಟಿಕ್ ಮುಕ್ತ ಜಾತ್ರೆ ನಡೆಯಬೇಕ್ಕೆನ್ನುವ ಆಶಯದೊಂದಿಗೆ ಅಭಿಯಾನವನ್ನು ಪ್ರಾರಂಭಿಸಿದೆ.

ಮನೆಯಿಂದಲೇ ಕೈ ಚೀಲಗಳನ್ನು ತರಬೇಕು,ದೇವರಿಗೆ ಹೂ ಹಣ್ಣು ಕಾಯಿ ಅರ್ಪಣೆ ಮಾಡುವವರು ಆದಷ್ಟು ಸಾಂಪ್ರದಾಯಿಕ ಶೈಲಿಯ ಬುಟ್ಟಿಗಳನ್ನು, ಬಟ್ಟೆ ಚೀಲಗಳನ್ನು ಬಳಕೆ ಮಾಡುವುದು, ಜಾತ್ರೆಯಲ್ಲಿ ಸಾಮಾನುಗಳನ್ನು ಖರೀದಿಸುವ ಸಂದರ್ಭದಲ್ಲಿ ಪ್ರತಿ ವಸ್ತುಗಳಿಗೂ ಅಂಗಡಿಯವರಿಂದ ಪ್ಲಾಸ್ಟಿಕ್‍ಯನ್ನು ಪಡೆದುಕೊಳ್ಳದೆ ಇರುವುದು, ನೀರಿನ ಬಾಟಲಿಗಳನ್ನು ಬೇಕಾಬಿಟ್ಟೆಯಾಗಿ ಎಲ್ಲೆಂದರಲ್ಲಿ ಎಸೆಯದೆ ಇರುವುದು ಅಭಿಯಾನದ ಮೂಲ ಉದ್ದೇಶವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು