ಕಾರವಾರ: ನಗರದ ಧೋಬಿಘಾಟ್ ರಸ್ತೆಯ ಶ್ರೀ ಸಾಯಿ ಮಂದಿರದ ಬಳಿ ಅಲ್ಪ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದ್ದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗಿದೆ. ಧೋಬಿಘಾಟ್ ರಸ್ತೆಯ ಮೂಲಕ ಸಾಯಿ ಮಂದಿರಕ್ಕೆ ತೆರಳುವ ಮಾರ್ಗದ ಪಕ್ಕದ ಗುಡ್ಡದಿಂದ ಬಂಡೆಗಲ್ಲುಗಳು ರಸ್ತೆ ಪಕ್ಕ ಉರುಳಿದೆ. ಈ ಸ್ಥಳದಲ್ಲಿ ಬೃಹತ್ ಬಂಡೆಗಲ್ಲುಗಳಿದ್ದು ಮತ್ತೆ ಕುಸಿತವಾಗುವ ಆತಂಕದ ಜನರಲ್ಲಿದೆ.
ಮಳೆಗಾಲದ ಅವಧಿಯಲ್ಲಿ ಜಿಲ್ಲೆ ಕಾರವಾರ-ಜೊಯಿಡಾ ಮಾರ್ಗ ಮಧ್ಯೆ, ಹೊನ್ನಾವರ ತಾಲೂಕಿನಲ್ಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಕುಸಿತವಾಗಿದೆ. ಜಿಲ್ಲೆಯಲ್ಲಿ ಅಲ್ಲಲ್ಲಿ ಗುಡ್ಡು ಕುಸಿತವಾಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಸದ್ಯ ಸುರಕ್ಷತಾ ಕ್ರಮವಾಗಿ ರಸ್ತೆ ಎರಡು ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿದ್ದು ಜನರು ರಸ್ತೆ ದಾಟದಂತೆ ಸೂಚಿಸಿದ್ದಾರೆ.