ಕಾರವಾರ: ಕಾರ್ಮಿಕ ಖಾತೆ ಸಚಿವರು ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ್ ನ ಅಧ್ಯಕ್ಷ ಶಿವರಾಮ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಕೆ.ಡಿ.ಸಿ.ಸಿ ಬ್ಯಾಂಕ್ ನ ಪ್ರಧಾನ ಕಚೇರಿ ಸಭಾಂಗಣದಲ್ಲಿ ಬ್ಯಾಂಕ್ ನ 102 ನೇ ವಾರ್ಷಿಕ ಸರ್ವಸಾಧಾರಣ ಸಭೆ ಶಿರಸಿಯಲ್ಲಿ ನಡೆಯಿತು.
ಜಿ.ಎಸ್.ಹೆಗಡೆ ಅಜ್ಜೀಬಳ ಸಹಕಾರ ಪ್ರಶಸ್ತಿ ಯನ್ನು ಸಹಕಾರಿ ಸೀತಾರಾಮ ಭಟ್ಟ ಇಟಗಿ ಅವರಿಗೆ ಹಾಗೂ ಸಹಕಾರಿ ಸಿಬ್ಬಂದಿ ಗಣಪತಿ ಹೆಗಡೆ ಗುಣವಂತೆ ಅವರಿಗೆ ಬ್ಯಾಂಕಿನ ಅಧ್ಯಕ್ಷ ಶಿವರಾಮ ಹೆಬ್ಬಾರ್ ಅವರು ಪ್ರಧಾನ ಮಾಡಿದರು. ಸುಂದರರಾವ ಪಂಡಿತ ಪ್ರಶಸ್ತಿಯನ್ನು ಇಡಗುಂದಿ ಸೇವಾ ಸಹಕಾರಿ ಸಂಘಕ್ಕೆ ಪ್ರದಾನ ಮಾಡಲಾಯಿತು.
ತಾಲೂಕಾ ಮಟ್ಟದ ೧೨ ಉತ್ತಮ ಪ್ರಾಥಮಿಕ ಸಹಕಾರಿ ಸಂಘಗಳಿಗೆ ಪ್ರಶಸ್ತಿ ನೀಡಲಾಯಿತು. ನೂರಕ್ಕೆ ನೂರು ಸಾಲ ವಸೂಲಿ ಮಾಡಿದ ೫ ಪ್ರಾಥಮಿಕ ಸಹಕಾರಿ ಸಂಘಗಳನ್ನು ಹಾಗೂ ೯ ವಿವಿಧ ವರ್ಗಗಳ ಉತ್ತಮ ಕೃಷಿಯೇತರ ಸಹಕಾರಿ ಸಂಘಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕರಾದ ಜಿ.ಆರ್.ಹೆಗಡೆ ಸೋಂದಾ, ಆರ್.ಎಂ.ಹೆಗಡೆ ಬಾಳೇಸರ, ರಾಘವೇಂದ್ರ ಶಾಸ್ತ್ರಿ, ಎಲ್.ಟಿ.ಪಾಟೀಲ, ಕೃಷ್ಣ ದೇಸಾಯಿ, ಪ್ರಕಾಶ ಗುನಗಿ, ಶಿವಾನಂದ ಹೆಗಡೆ ಕಡತೋಕ, ವ್ಯವಸ್ಥಾಪಕರ ನಿರ್ದೇಶಕರು, ಸದಸ್ಯರು ಸೇರಿ ಹಲವರು ಉಪಸ್ಥಿತರಿದ್ದರು.