ಕಾರವಾರ: ಜಿಲ್ಲೆಯ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡುವ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಹಾಗೂ ಸಾರ್ವಜನಿಕ ಹಿತ ದೃಷ್ಠಿಯಿಂದ ಮದ್ಯ ಮಾರಾಟ ಬಂದ್ ಗೆ ಆದೇಶಿಸಲಾಗಿದೆ.
ಹಳಿಯಾಳ, ದಾಂಡೇಲಿ, ಕಾರವಾರ ನಗರ ಪೊಲೀಸ್ ಠಾಣೆ, ಮಲ್ಲಾಪುರ ಪೊಲೀಸ್ ಠಾಣೆ, ಅಂಕೋಲಾ ತಾಲೂಕುಗಳ ವ್ಯಾಪ್ತಿಯಲ್ಲಿ ಸೆ.10 ರ ಬೆಳಿಗ್ಗೆ 6 ರಿಂದ ಸೆ. 11 ರ ಬೆಳಿಗ್ಗೆ 6 ರವರೆಗೆ ವೈನ್ಶಾಪ್ ಮತ್ತು ಬಾರ್ ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮತ್ತು ಸಾಗಾಟವನ್ನು ಬಂದ್ ಮಾಡಲು ಹಾಗೂ ಕಾರವಾರ ಅಬಕಾರಿ ಉಪ ಆಯುಕ್ತರು ಈ ಆದೇಶವನ್ನು ಸಂಬಂಧಿಸಿದವರಿಗೆ ಜಾರಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಆದೇಶಿಸಿದ್ದಾರೆ.