News Karnataka Kannada
Thursday, May 02 2024
ಉತ್ತರಕನ್ನಡ

ಕಾರವಾರ: ಗ್ರಾಮೀಣ ಪ್ರದೇಶಕ್ಕೆ ತೆರಳು ಬಸ್ ವ್ಯವಸ್ಥೆ ಕಲ್ಪಿಸಲು ಮನವಿ

Request to provide bus facility to go to rural areas
Photo Credit : By Author

ಕಾರವಾರ:ವಿವಿಧ ಕೆಲಸ ಕಾರ್ಯಗಳಿಗೆ ನಗರಕ್ಕೆ ಬರುವ ಜನರಿಗೆ ವಾಪಸ್ಸಾಗಲು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ವಿಶ್ವ ಕನ್ನಡಿಗರ ರಕ್ಷಣಾ ವೇದಿಕೆ ಪದಾಧಿಕಾರಿಗಳು ಕಾರವಾರ ಬಸ್ ಡಿಪೋವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದಾರೆ.

ಮನವಿ ಸಲ್ಲಿಸುವ ಪೂರ್ವದಲ್ಲಿ ಕಿನ್ನರ ಬೋರಿಭಾಗ್ ಬಳಿ ರಸ್ತೆ ತಡೆಸಿದ ಸಂಘಟನೆಯ ಪದಾಧಿಕಾರಿಗಳು ರಾತ್ರಿ ವಸತಿ ಬಸ್ ಸೌಲಭ್ಯ ಕೋರಿ ಮನವಿ ಮಾಡಿದರು. ಕಾರವಾರದಿಂದ ಬೇಳೂರು ಗ್ರಾಮಕ್ಕೆ ರಾತ್ರಿ 7.30ರಸಮಯದಲ್ಲಿವಾಪಸ್ಸಾಗಲು ಬಸ್ ವ್ಯವಸ್ಥೆಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ತಾಲೂಕಿನ ಕಿನ್ನರ, ಬೋರಿಭಾಗ, ಸಿದ್ದರಐಟಿಐ, ಖಾರ್ಗೇಜೂಗ್,ಉಬಳೇಜೂಗ್, ವೈಲವಾಡಾ,ಖಾರ್ಗಾ, ಬರಗಲ್ ದಿಂದ ಬೇಳೂರು ಮಾರ್ಗವಾಗಿ  ಸಾಗುವ ಬಸ್ ಇಲ್ಲದೆ ಆಯಾ ಗ್ರಾಮದ ಜನರಿಗೆ ತೀವ್ರ ಸಮಸ್ಯೆ ಆಗುತ್ತಿದೆ.

ಗ್ರಾಮದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಜನರುಅರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಅನೇಕ ಜನರು ಜೀವನ ನಿರ್ವಹಣೆಗಾಗಿ ಕಾರವಾರ ನಗರಕ್ಕೆ ಕೂಲಿ, ಸೇರಿದಂತೆ ಇನ್ನಿತರ ಕೆಲಸ ಮಾಡಲು ಆಗಮಿಸುತ್ತಾರೆ.ನಗರದಲ್ಲಿ ಕೆಲಸ ಮಾಡಿ ರಾತ್ರಿ ವಾಪಸ್ಸಾಗುವವರಿಗೆ ಸೂಕ್ತ ಬಸ್, ಖಾಸಗಿವಾಹನ,ರಿಕ್ಷಾ ಇಲ್ಲದ ಕಾರಣ ಸಾರಿಗೆ ಬಸ್ಸನ್ನೇ ಅವಲಂಬಿಸಿದ್ದಾರೆ. ಆದರೆ ಸೂಕ್ತ ಬಸ್ ಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಇನ್ನೂ 15 ದಿನದಲ್ಲಿ ಆಯಾ ಭಾಗದ ಜನರಿಗೆ ಸಂಚರಿಸಲು ಬಸ್ ವ್ಯವಸ್ಥೆ ಕಲ್ಪಿಸದೆ ಇದ್ದರೇ ನಗರದ ಬಸ್ ಡಿಪೋ ಬಳಿ ಪ್ರತಿಭನೆ ನಡೆಸಲಾಗಿವುದು. ನಗರದಲ್ಲಿ ಎಲ್ಲ ಬಸ್ಗಳನ್ನು ತಡೆ ಹಿಡಿದು ಪ್ರತಿಭಟಿಸಲಾಗುವುದುಎಂದು ಮನವಿಯ ಮೂಲಕಎಚ್ಚರಿಸಿದ್ದಾರೆ.ಕಾರವಾರ ಡಿಪೋ ವ್ಯವಸ್ಥಾಪಕರಿಗೆ ವಿಶ್ವ ಕನ್ನಡರಿಗರ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ರಾಜೇಶ ನಾಯ್ಕ ಅವರು ಮನವಿ ಸಲ್ಲಿಸಿದರು.

ಈ ವೇಳೆ ಜಿಲ್ಲಾಧ್ಯಕ್ಷ ಕೃಷ್ಣಪ್ರಸಾದ ನಾಯ್ಕ,ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ಪೂಜಾರಿ,ಸುನಿಲ್ ಕೋಠಾರಕರ್,ಗುರುನಾಥ ನಾಗೇಕರ್, ದಿನೇಶ  ಕಾಂಡೇಕರ ಹಾಗೂ ಇನ್ನಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು