News Karnataka Kannada
Saturday, May 04 2024
ಉತ್ತರಕನ್ನಡ

ಕಾರವಾರ: ರಾಜಕೀಯ ನಿರ್ಧಾರ ಕೈಗೊಂಡಿಲ್ಲ – ಮಾಜಿ ಸಚಿವ ಆನಂದ ಅಸ್ನೋಟಿಕರ್

Karwar: No political decision has been taken, says former minister Anand Asnotikar
Photo Credit : News Kannada

ಕಾರವಾರ: ಬರುವ ವಿಧಾನ ಸಭೆ ಚುಣಾವಣೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದ್ದಾರೆ. ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಅಸ್ನೋಟಿಕರ್ ಅಭಿಮಾನಿಗಳು, ಮತದಾರರ ಗೊಂದಲದಲ್ಲಿ ಇರಬಾರದು ಎನ್ನುವ ಕಾರಣಕ್ಕೆ ಆನಂದ ಅಸ್ನೋಟಿಕರ್ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಳೆದ ಎರಡು ದಿನಗಳಿಂದ ಖಾಸಗಿ ಮಾಹಿತಿ ಅವರು ಆಕಾಂಕ್ಷಿಗಳ ಸಮೀಕ್ಷೆ ಮಾಡಬೇಕು ಎಂದು ಆನ್ಲೈನ್ನಲ್ಲಿ ವೊಟಿಂಗ್ ಮಾಡಲು ೩೧ರಂದು ಮತಯಾಚನೆ ಮಾಡಿ ಎಂದು ಪ್ರಚಾರ ಮಾಡುತ್ತಿದೆ. ಇದರಿಂದ ಕ್ಷೇತ್ರದ ಮತದಾರರ, ತನ್ನ ಹಿತೈಶಿಗಳು ತನಗೆ ಸತತವಾಗಿ ಸಂಪರ್ಕಿಸುತ್ತಿದ್ದಾರೆ. ಇದರಿಂದ ಅಸ್ನೋಟಿಕರ್ ಅಭಿಮಾನಗಳು ಹಾಗೂ ಮತದಾರರಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

ಸತತವಾಗಿ ನನಗೆ ಎರಡು ದಿನಗಳಿಂದ ನನಗೆ ಬೇಕಾದವರು, ನನಗೆ ಬಹಳ ಆಶೀರ್ವಾದ ಮಾಡುತ್ತಿರುವ ಕಾರ್ಯಕರ್ತರು ಫೋನ್ ಮಾಡಿ, ನಾವೇನು ಮಾಡಬೇಕು. ತಾವು ಪಕ್ಷದಿಂದ ಕಣಕ್ಕೆ ಇಳಿಯುತ್ತಿದ್ದೀರಿ. ಯಾವ ಪಕ್ಷಕ್ಕೆ ನಾವು ಮತಹಾಕಬೇಕು. ತಾವು ಚುನಾವಣೆಗೆ ನಿಲ್ಲುತ್ತಿದ್ದೀರಾ ಹೇಗೆ, ಏನು ಎಂದು ಕೇಳುತ್ತಿದ್ದಾರೆ. ನನ್ನ ಸ್ನೇಹಿತರು, ನನ್ನ ಅಭಿಮಾನಿಗಳು ನನ್ನನ್ನು ಆಶೀರ್ವಾದ ಮಾಡಿದವರು ಬಹಳ ಗೊಂದಲದಲ್ಲಿದ್ದಾರೆ. ಈ ದಿನ ಅವರಿಗೆಲ್ಲರಿಗೂ ನಾನು ಕೈ ಮುಗಿದು ವಿನಂತಿ ಮಾಡುತ್ತಿದ್ದೇನೆ. ದಯವಿಟ್ಟು ಖಾಸಗಿ ವಾಹಿನಿಯವರಿಗೂ ನಾನು ವಿನಂತಿ ಮಾಡುತ್ತಿದ್ದೇನೆ. ಪ್ರತಿಸ್ಪರ್ಧಿಗಳ ಫೋಟೊ ಹಾಕುತ್ತಿದ್ದೀರಿ. ಆ ಸ್ಪರ್ಧೆಯಲ್ಲಿ ನಾನಿಲ್ಲ ಎಂದು ಹೇಳಿದ್ದಾರೆ.

ನಾನು ಇನ್ನೂ ಯಾವುದೇ ರಾಜಕೀಯ ನಿರ್ಧಾರ ತೆಗೆದುಕೊಂಡಿಲ್ಲ. ನನ್ನ ಬೆಂಬಲಿಗರಿಗೆ, ಕಾರವಾರ-ಅಂಕೋಲಾ ಕ್ಷೇತ್ರದ ಮತದಾರರಿಗೆ ವಿನಂತಿ ಮಾಡುತ್ತಿದ್ದೇನೆ. ನಾನು ಈ ಸಮೀಕ್ಷೆಯಲ್ಲಿ ಭಾಗಿಯಾಗಲ್ಲ. ಮುಂದೆ ಬರುವ ಅಭ್ಯರ್ಥಿಗಳು ಯಾವ ರೀತಿ ಇರಬೇಕು.ಅಭ್ಯರ್ಥಿಗಳಲ್ಲಿ ಯಾರಿಗೆ ನೀವು ಮತಹಾಕಬೇಕು ಎನ್ನುವುದು ನಿಮಗೆ ಬಿಟ್ಟಿರುವ ವಿಚಾರ. ಆದರೆ, ಯಾವ ಅಭ್ಯರ್ಥಿ ಈ ಭಾಗದಲ್ಲಿ ಶಾಸಕರಾಗಬೇಕೋ ಆ ಅಭ್ಯರ್ಥಿ ಈ ಕ್ಷೇತ್ರದ ಬಗ್ಗೆಗುರಿಯನ್ನು ಹೊಂದಿರಬೇಕು. ಈ ಕ್ಷೇತ್ರವನ್ನು ಯಾವ ರೀತಿ ನಾನು ಅಭಿವೃದ್ಧಿ ಮಾಡಬಹುದು ಎನ್ನುವ ಕಲ್ಪನೆ ಇರಬೇಕು. ಈ ಕ್ಷೇತ್ರದ ಎಲ್ಲಾ ಸಮಾಜವನ್ನು ಒಂದಾಗಿನೋಡಬೇಕು. ಪ್ರತಿಯೊಂದು ಸಮಾಜವನ್ನು ಒಗ್ಗೂಡಿಸಿಕೊಂಡು ಕರೆದುಕೊಂಡು ಹೋಗಬೇಕು. ಹಿಂದೂ ಧರ್ಮದ ಎಷ್ಟೋ ಹಿಂದೂಳಿದ ಸಮಾಜದವರಿಗೆ ನ್ಯಾಯ ಸಿಗಬೇಕಾಗಿದೆ. ಹಾಲಕ್ಕಿ ಮತ್ತು ಕುಣಬಿ ಸಮಾಜದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ಬಹಳ ದೊಡ್ಡ ಜವಾಬ್ದಾರಿ ಈ ಕ್ಷೇತ್ರದ ಜನಪ್ರತಿನಿಧಿಯ ಮೇಲಿದೆ. ಬುಡಕಟ್ಟು ಜನಾಂಗದವರು ಇವತ್ತು ಬಹಳ ಕಷ್ಟದಲ್ಲಿದ್ದಾರೆ. ಈಗಾಗಲೇ ಪರಿಶಿಷ್ಟ ಪಂಗಡಕ್ಕೆ ಶೇಕಡ ಏಳರಷ್ಟು ಮೀಸಲಾತಿ ಇದೆ. ಯಡಿಯೂರಪ್ಪ ಸರ್ಕಾರದಲ್ಲಿ, ನನ್ನ ಅವಧಿಯಲ್ಲಿ ನಾನು ಹಾಲಕ್ಕಿ ಸಮಾಜದ ಪ್ರಸ್ತಾವನೆಯನ್ನು ಪೂರ್ಣವಾಗಿ ಅಧ್ಯಯನ ಮಾಡಿ. ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ನಿರ್ಧಾರ ಮಾಡಿ ಆ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿದ್ದೇವು ಎನ್ನುವ ವಿಚಾರ ತಮಗೆಲ್ಲರಿಗೂ ಗೊತ್ತಿದೆ. ಅದು ಕೇಂದ್ರದಿಂದ ತಿರಸ್ಕೃತಗೊಂಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಹಾಲಕ್ಕಿ ಮತ್ತು ಕುಣಬಿ ಸೇರಿದಂತೆ ಎಲ್ಲಾ ಬುಡಕಟ್ಟು, ಹಿಂದೂಳಿದ ಸಮುದಾಯಕ್ಕೆ ನ್ಯಾಯ ಕೊಡಿಸಲು ಈ ಭಾಗದ ಶಾಸಕರು ಬದ್ಧರಾಗಿಬೇಕು ಎಂದು ಅಸ್ನೋಟಿಕರ್ ವಿಡಿಯೋ ಮೂಲಕ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು