ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ವಿವಿಧೆಡೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ತಂಡ ದಾಳಿ ತೀವ್ರ ಪರಿಶೀಲನೆ ನಡೆಸಿದೆ.
ಭಯೋತ್ಪಾದನಾ ಸಂಘಟನೆ ನಂಟು ಹೊಂದಿರುವ ಶಂಕೆಯ ಮೇಲೆ ದಾಳಿ ಮಾಡಲಾಗಿದೆ. ಶಿರಸಿಯ ಟಿಪ್ಪುಸುಲ್ತಾನ್ ನಗರದ ಮನೆಯೊಂದರ ಮೇಲೆ ದಾಳಿ ಮಾಡಿದ್ದು, ಒಬ್ಬನನ್ನು ವಶಕ್ಕೆ ಪಡೆದಿದೆ. ಎಸ್ಡಿಪಿಐ ಮುಖಂಡ ಹಝೀಝ್ ಅಬ್ದುಲ್ ಶುಕುರ್ ಹೊನ್ನಾವರ ಎನ್ನುವವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಭಯೋತ್ಪಾದನಾ ಸಂಘಟನೆಗಳ ನಂಟು ಹೊಂದಿರುವ ಶಂಕೆಯಿಂದ ದಾಳಿ ಮಾಡಿ ವಿಚಾರಣೆ ಮಾಡಿದೆ ಎನ್ನಲಾಗಿದೆ. ಈ ಹಿಂದೆಯು ಸಹ ಎನ್ಐಎ ತಂಡ ಭಟ್ಕಳದಲ್ಲಿ ದಾಳಿಸಿ ನಡೆಸಿತ್ತು.