ಮಂಗಳೂರು: ಎಸ್ ಡಿಪಿಐ ಕಚೇರಿ ಮೇಲೆ ಎನ್ ಐಎ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರಾಜಕೀಯ ಪ್ರೇರಿತ ದಾಳಿ ಆಗಿದೆ, ಎನ್ ಐ ಎ ಅಧಿಕಾರಿಗಳು ಮುಂಜಾನೆ 3.30 ರ ವೇಳೆಗೆ ಕಛೇರಿ ಗೆ ಬಂದಿದ್ದಾರೆ, ನನಗೆ 5 ಗಂಟೆಯ ವೇಳೆಗೆ ಮಾಹಿತಿ ಲಭ್ಯವಾಗಿದೆ. ಎನ್ ಐ ಅಧಿಕಾರಿಗಳು ಪಿಎಫ್ಐ ಕಛೇರಿಗೆ ದಾಳಿ ಮಾಡುವ ಸಲುವಾಗಿ ಬಂದಿದ್ದರು. ಆದರೆ ನಮ್ಮ ಕಛೇರಿ ಯೂ ಹತ್ತಿರದಲ್ಲಿ ಇದ್ದ ಕಾರಣ ನಮ್ಮ ಕಛೇರಿ ಮೇಲೂ ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಕಛೇರಿಯಲ್ಲಿಯಾವುದೇ ದಾಖಲೆಗಳು ಪತ್ತೆಯಾಗಿಲ್ಲ,ಕಛೇರಿ ಕಟ್ಟಡದ ಬಾಡಿಗೆ ಅಗ್ರಿಮೆಂಟ್ ದಾಖಲೆ ಪಡೆದುಕೊಂಡು ಹೋಗಿದ್ದಾರೆ. ಕಛೇರಿಯಲ್ಲಿ ಬಳಕೆ ಮಾಡುವ ಲ್ಯಾಪ್ ಟಾಪ್, ಕೆಲ ಫೋಟೋ,ಪೆನ್ ಡ್ರೈವ್ ಜಪ್ತಿ ಮಾಡಿದ್ದಾರೆ ಅಬೂಬುಕರ್ ಕುಳಾಯಿ ಪ್ರತಿಕ್ರಿಯೆ ನೀಡಿದ್ದಾರೆ.