News Karnataka Kannada
Friday, May 03 2024
ಉತ್ತರಕನ್ನಡ

ಕಾರವಾರ: ಬೈತಖೋಲ ಗುಡ್ಡದಲ್ಲಿ ರಸ್ತೆ ನಿರ್ಮಾಣಕ್ಕೆ ತಡೆಯಾಜ್ಞೆ ಮುಂದುವರಿಸಿದ ಹೈಕೋರ್ಟ್

High Court stays construction of road at Baithakhola hill
Photo Credit : By Author

ಕಾರವಾರ: ಸ್ಥಳೀಯರಿಗೆ ಸಮಸ್ಯೆ ಉಂಟಾಗುವ ರೀತಿಯಲ್ಲಿ ಇಲ್ಲಿನ ಬೈತಖೋಲ ಗುಡ್ಡದಲ್ಲಿ ನೌಕಾನೆಲೆಯವರು ಆರಂಭಿಸಿದ್ದ ರಸ್ತೆ ಕಾಮಗಾರಿಗೆ ಮಾ.23 ರಂದು ನೀಡಿದ್ದ ತಡೆಯಾಜ್ಞೆಯ ಆದೇಶವನ್ನು ಹೈಕೋರ್ಟ್ ಮುಂದಿನ ಅವಧಿಗೆ ವಿಸ್ತರಿಸಿದೆ.

ಈ ಬಗ್ಗೆ ಬೈತಖೋಲ ಅಲಿಗದ್ದಾ ನಿವಾಸಿತರ ಸಂಘದ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. ಸೀಬರ್ಡ್ ನೌಕಾನೆಲೆಯವರು ಬೈತಖೋಲದ ಶ್ರೀ ಭೂದೇವಿ ಗುಡ್ಡದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ನವೆಂಬರ್ 2021 ರಲ್ಲಿ ಪ್ರಾರಂಭ ಮಾಡಿದ ಸಂದರ್ಭದಲ್ಲಿ ಈ ರಸ್ತೆ ಕಾಮಗಾರಿಯಿಂದ ಸಂಭವಿಸುವ ಪ್ರಕೃತಿ ವಿಕೋಪ ಮತ್ತು ಭೂಕುಸಿತದಿಂದ ಗುಡ್ಡದ ತಪ್ಪಲ್ಲಿನಲ್ಲಿ ನೆಲಸಿರುವ ಸುಮಾರು 500 ಕ್ಕೂ ಹೆಚ್ಚು ಕುಟುಂಬಗಳಿಗೆ ಆಗುವ ಜೀವಹಾನಿ ಬಗ್ಗೆ ಸೀಬರ್ಡ್ ಅಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿ ಕೊಟ್ಟಿದ್ದರು.

ಡಿಸೆಂಬರ್-2022 ರಲ್ಲಿ ಮತ್ತೆ ರಸ್ತೆ ಕಾಮಗಾರಿಯನ್ನು ಸೀಬರ್ಡ್ ಅಧಿಕಾರಿಗಳು ಆರಂಭಿಸಲು ಪ್ರಯತ್ನಿಸಿದಾಗ ಬೈತಖೋಲ ನಿವಾಸಿತರು ಪುನಃ ಸೀಬರ್ಡ್ ಅಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮುಖಾಂತರ ಪ್ರತಿಭಟನೆ ನಡೆಸಿದ್ದರು. ಕಾನೂನು ಹೋರಾಟಕ್ಕಿಳಿದಿದ್ದ ಸ್ಥಳಿಯರು ಮಾ.20 ರಂದು ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠದಲ್ಲಿ ರೀಟ್ ಅರ್ಜಿಯ ಮುಖಾಂತರ ದಾವೆಯನ್ನು ಹೂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು