ಕಾರವಾರ: ಕೇಂದ್ರ ಸರ್ಕಾರ ರೈತರಿಗೆ ನೀಡಿದ ಭರವಸೆಗಳನ್ನು ವರ್ಷವಾದರೂ ಈಡೇರಿಸದೆ ಇರುವುದನ್ನು ಖಂಡಿಸಿ ಮತ್ತು ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತರಿ, ವಿದ್ಯುತ್ ಮಸೂದೆ ವಾಪಸ್ಸಾತಿ ಸೇರಿದಂತೆ ಇತರ ಬೇಡಿಕೆಗಳ ಬಗ್ಗೆ ಸಂಸತ್ ನಲ್ಲಿ ಧ್ವನಿ ಎತ್ತುವಂತೆ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯೂ ಜಿಲ್ಲೆಯ ಸಂಸದರಿಗೆ ಮನವಿ ಮೂಲಕ ಆಗ್ರಹಿಸಿದೆ.
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ್ ನಾಯಕ ಕೇಂದ್ರ, ರಾಜ್ಯ ಸರ್ಕಾರಗಳ ರೈತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ಮೂಲಕ ಹೋರಾಟ ನಡೆಸಲಾಗುತ್ತಿದೆ.
ಅದರಂತೆ ಸಂಯುಕ್ತ ಕಿಸಾನ್ ಮೋರ್ಚಾವು ಕಳೆದ ವರ್ಷ ದೇಹಲಿಯಲ್ಲಿ ವರ್ಷಗಳ ಕಾಲ ಹೋರಾಟ ನಡೆಸಿ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿತ್ತು. ಇದಕ್ಕೆ ಸರ್ಕಾರ ಭರವಸೆ ನೀಡಿ, ಚಳುವಳಿ ಹಿಂಪಡೆಯುವತೆಯೂ ವಿನಂತಿಸಿತ್ತು. ಅದರಂತೆ ದೆಹಲಿ ಗಡಿಗಳಲ್ಲಿನ ಪ್ರತಿಭಟನೆಗಳು ಹಿಂಪಡೆದು ವರ್ಷವಾದರೂ ಈವರೆಗೂ ಯಾವುದೇ ಬೇಡಿಕೆಗಳು ಈಡೇರಿಸಿರಲಿಲ್ಲ ಎಂದು ದೂರಿದರು.
ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಪಾರಸ್ಸಿನಂತೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತರಿಪಡಿಸುವ ಕಾನೂನು ಅಂಗೀಕರಿಸಬೇಕು. ಎಂ.ಎಸ್.ಪಿ. ಕಾನೂನು ಖಾತರಿಗಾಗಿ ಸಂಯುಕ್ತ ಕಿಸಾನ್ ಮೋರ್ಚಾದ ಪ್ರತಿನಿಧಿಗಳನ್ನು ಸೇರಿಸಿ ಈಗಿನ ಸಮಿತಿ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಇನ್ನು ಸಾಲದ ಸುಳಿಗೆ ಸಿಲುಕಿರುವ ರೈತರು ಆತ್ಮಹತ್ಯೆ ದಾರಿ ತುಳಿಯುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಸಾಲಮನ್ನಾ ಮಾಡಲು ಕಗರಮ ಕೈಗೊಳ್ಳಬೇಕು. ರೈತರಿಗೆ ಕಂಠಕವಾಗಲಿರುವ ವಿದ್ಯುತ್ ಬಿಲ್ ಮಸೂದೆಯನ್ನು ಯಾವುದೇ ರೈತರೊಂದಿಗೆ ಚರ್ಚಿಸದೆ ಪಾಸ್ ಮಾಡಿರುವುದನ್ನು ಸಂಸತ್ತಿನಿದ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಈ ವೇಳೆ ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ತಿಲಕ್ ಗೌಡ, ಸಂತೋಷ ನಾಯ್ಕ, ಶಿವರಾಮ್ ಪಟಗಾರ, ವಿರೇಶ್ ರಾಥೋಡ್ ಇದ್ದರು.