News Karnataka Kannada
Thursday, May 09 2024
ಉತ್ತರಕನ್ನಡ

ಕಾರವಾರ: ಶಿರೂರು ಟೋಲ್ ಬಳಿ ಅಪಘಾತ, ಹೊನ್ನಾವರದ ನಾಲ್ವರ ಸಾವು

Woman killed in accident, son Ashwin and husband critically injured
Photo Credit : Wikimedia
ಕಾರವಾರ: ವೇಗದಿಂದ ಬಂದ ಅಂಬುಲೈನ್ಸ್ ನಿಯಂತ್ರಣ ತಪ್ಪಿದ ಪರಿಣಾಮ ಶಿರೂರು ಟೋಲ್ ಸಮೀಪದ ಕಂಬಕ್ಕೆ, ಡಿಕ್ಕಿ ಹೊಡೆದು ಪಲ್ಟಿಯಾಗಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿದ್ದಾರೆ. ಟೋಲ್‌ ಸಿಬ್ಬಂದಿಯೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಹೊನ್ನಾವರ ಹಾಡಗೇರಿ ನಿವಾಸಿಗರಾಗಿದ್ದು ರೋಗಿಗೆ ಬಿ.ಪಿ ಕಡಿಮೆ ಆಗಿ ಬ್ರೇನ್ ಬ್ಲಾಕ್ ಆಗಿದ್ದರಿಂದ‌ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಒಯ್ಯಲಾಗುತ್ತಿತ್ತು. ಒಟ್ಟು 7 ಮಂದಿ ಕುಟುಂಬಸ್ತರು ಅಂಬ್ಯುಲೆನ್ಸ ನಲ್ಲಿ ತೆರಳುತ್ತಿದ್ದರು ಅಪಘಾತದಲ್ಲಿ ರೋಗಿ ಲೋಕೇಶ ನಾಯ್ಕ, ಆತನ ಪತ್ನಿ ಜ್ಯೋತಿ ನಾಯ್ಕ, ಗಜಾನನ ನಾಯ್ಕ ಹಾಗೂ ಮಂಜುನಾಥ ಮೃತರಾಗಿದ್ದಾರೆ.
ಚಾಲಕ ರೋಶನ್ ಹಾಗೂ ಟೋಲ್  ಸಿಬ್ಬಂದಿ ಚಿಕ್ಕ ಪುಟ್ಟ ಗಾಯದಿಂದ ಬಚಾವ್ ಆಗಿದ್ದಾನೆ. ದೂರದಿಂದ ಆಂಬುಲೆನ್ಸ್ ಬರುತ್ತಿದ್ದ ಸದ್ದು ಕೇಳಿ ಟೋಲ್​ ಗೇಟ್​ನಲ್ಲಿದ್ದ ಮೂವರು ಆಂಬುಲೆನ್ಸ್ ಸರಾಗವಾಗಿ ಹೋಗಲೆಂದು ಮಳೆಯಲ್ಲೇ ಹೊರಗೆ ಓಡಿ ಬಂದು ಬ್ಯಾರಿಕೇಡ್​​ಗಳನ್ನು ತೆಗೆಯುತ್ತಿದ್ದಾಗ, ಅಲ್ಲೇ ಮಲಗಿದ್ದ ಜಾನುವಾರು ಅಡ್ಡ ಬಂದಿದೆ. ಇದರಿಂದ ನಿಯಂತ್ರಣ ತಪ್ಪಿ ವೇಗವಾಗಿ ವಾಲುತ್ತ ಬಂದ ಆಂಬುಲೆನ್ಸ್‌ ಪಲ್ಟಿ ಹೊಡೆದು ಟೋಲ್‌ಗೆ ಬಂದು ಬಡಿದಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ಬಳಿ ಈ ಭಯಂಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಟೋಲ್‌ ಸಿಬ್ಬಂದಿಯೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು