News Karnataka Kannada
Tuesday, April 30 2024
ಉತ್ತರಕನ್ನಡ

ಕಾರವಾರ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಟ್ಯಾಂಕರ್ ಮಾಲೀಕರ ಸಂಘದ ಸಭೆ

district-tanker-owners-association-meeting-held-at-deputy-commissioners-office
Photo Credit : By Author

ಕಾರವಾರ: ಇಲ್ಲಿನ ಬಂದರಿನ ಮೂಲಕ ಆಮದು, ರಫ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಡಾಂಬರು ಮತ್ತು ಮೊಲಾಸಿಸ್ ಸಾಗಿಸುವ ಕುರಿತು ಖಾಸಗಿ ಕಂಪೆನಿಯ ಜೊತೆಗೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಟ್ಯಾಂಕರ್ ಮಾಲೀಕರ ಸಂಘದ ಸದಸ್ಯರು ಸಭೆ ನಡೆಸಿದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ನೇತೃತ್ವದಲ್ಲಿ ಸಭೆ ನಡೆಯಿತು. ಡಾಂಬರು ಮತ್ತು ಮೊಲಾಸಿಸ್  ರಸ್ತೆ ಮಾರ್ಗದ ಮೂಲಕ ಸಾಗಿಸಲು ಖಾಸಗಿ ಕಂಪನಿಗಳು ಸ್ಥಳೀಯ ಟ್ಯಾಂಕರ್ ಲಾರಿಗಳನ್ನು ಬಳಸುತ್ತಿಲ್ಲ ಎಂದು ಜಿಲ್ಲಾ ಟ್ಯಾಂಕರ್ ಮಾಲಿಕರ ಸಂಘದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಭೆ ಆಯೋಜಿಸಲಾಗಿತ್ತು.

ಕಾರವಾರದ ವಾಣಿಜ್ಯ ಬಂದರು ಮೂಲಕ ಡಾಂಬರು ಆಮದು ಆಗಿ ಅದನ್ನು ಹುಬ್ಬಳ್ಳಿ ಮಾರ್ಗದ ಮೂಲಕ ಬೆಳಗಾವಿ, ಹುಬ್ಬಳ್ಳಿ ಕಡೆಯಿಂದ ಮೊಲಾಸಿಸ್ ಕಾರವಾರ ವಾಣಿಜ್ಯ ಬಂದರಿಗೆ ಬಂದು ಹಡಗುಗಳ ಮೂಲಕ ರಪ್ತಾಗುತ್ತದೆ. 16 ಚಕ್ರದ ಲಾರಿಗಳು ಮತ್ತು 10, 12 ಚಕ್ರದ ಲಾರಿಗಳ ನಿರ್ವಹಣೆ ವೆಚ್ಚ ಒಂದೇ ಆಗಿದೆ. ಹಾಗಾಗಿ 10, 12 ಚಕ್ರದ ಲಾರಿಗಳು ತಮಗೆ ಉಪಯೋಗ ಆಗುವುದಿಲ್ಲ. ಕಂಪನಿಗೆ ಸೇರಿದ 12 ಚಕ್ರದ ಲಾರಿಗಳೇ ಬಳಕೆ ಇಲ್ಲದೆ ನಿಂತಿವೆ. 16 ಚಕ್ರದ ಲಾರಿಗಳು ಹೆಚ್ಚು ಬಳಕೆಯಲ್ಲಿವೆ ಎಂದು ಕಂಪನಿಗಳ ಮುಖ್ಯಸ್ಥರು ತಿಳಿಸಿದರು.

ಬೆಳಗಾವಿಯ ಮಾಜಿ ಶಾಸಕ ಫಿರೋಜ್ ಶೇಠ್ ಅವರು ತಮ್ಮ ಐಎಂಸಿಎಲ್ ಕಂಪನಿ ಪರವಾಗಿ ಹಾಜರಿದ್ದರು. ಮೈಸೂರು ಮರ್ಕಂಟೈಲ್ ಕಂಪನಿ ಲಿ. ಸಿಇಒ ಎಚ್.ಎಸ್. ಶೆಟ್ಟಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು