News Karnataka Kannada
Saturday, May 11 2024
ಉತ್ತರಕನ್ನಡ

ಕಾರವಾರ: ಕುಮಟಾದ ಮಣಕಿ ಮೈದಾನದಲ್ಲಿ ಕಾಂಗ್ರೆಸ್ ನಿಂದ ಜನಜಾಗೃತಿ ಸಮಾವೇಶ

Congress holds janajagruti rally at Manaki Maidan in Kumta
Photo Credit : By Author

ಕಾರವಾರ: ಕಳೆದ ವಿಧಾನ ಸಭೆಚುನಾವಣೆಯಲ್ಲಿ ಮೀನುಗಾರ ಯುವಕ ಪರೇಶ ಮೇಸ್ತಾರ ಸಾವನ್ನು ಕೊಲೆ ಎಂದು ಬಿಂಬಿಸಿ, ನಮ್ಮ ವಿರುದ್ಧ ಅಪಪ್ರಚಾರ ಮಾಡಿ ಚುನಾವಣೆಯನ್ನು ಗೆದ್ದಿದ್ದರು. ಅದಕ್ಕಾಗಿ ನ. ೨೪ ರಂದು ಕುಮಟಾದ ಮಣಕಿ ಮೈದಾನದಲ್ಲಿ ಜನಜಾಗೃತಿ ಸಮಾವೇಶವನ್ನು ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.

ನಗರದ ಪತ್ರಿಕಾಭವದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಪಿ.ಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ, ಕಾಂಗ್ರೆಸ್ ಮುಖಂಡರಾದ ರಣದೀಪ ಸುರ್ಜೆವಾಲಾ, ಸತೀಶ ಜಾರಕಿಹೊಳಿ, ವೀರಪ್ಪ ಮೊಯಿಲಿ, ಮಯೂರ ಜೈಕುಮಾರ ಸೇರಿದಂತೆ ಅನೇಕ ನಾಯಕರು ಆಗಮಿಸಲಿದ್ದಾರೆ.

ಕಾರ್ಯಕ್ರಮದ ಮೂಲಕ ಪರೇಶ ಮೇಸ್ತಾರ ಸಾವಿನ ಸತ್ಯವನ್ನು ಹೊರಹಾಕಿ, ಜನರಲ್ಲಿ ಜನಜಾಗೃತಿ ಮೂಡಿಸಲಾಗುವುದು. ಈಗ ಸಿ.ಬಿ.ಐ. ಪರೇಶ ಮೇಸ್ತಾರ ಸಾವಿನ ಪ್ರಕರಣಕ್ಕೆ `ಬಿ’ ರಿಪೋರ್ಟ ಹಾಕಿ, ಇದೊಂದು ಸಹಜ ಸಾವು ಎಂದು ತಿಳಿಸಿದೆ. ಆದರೂ ಬಿಜೆಪಿಯವರು ಪ್ರಕರಣವನ್ನು ಮತ್ತೆ ಮರುಪರಿಶೀಲನೆ ಹೆಸರಿನಲ್ಲಿ ಜನರನ್ನು ಯಾಮಾರಿಸುವ ಪ್ರಯತ್ನ ಮಾಡುತ್ತಿದ್ದು, ಮರುಪರಿಶೀಲನೆ ನಡೆಸಿದರೂ ಆದಷ್ಟು ಬೇಗ ಚುನಾವಣೆಯ ಮೊದಲೆ ಸತ್ಯ ಬಹಿರಂಗವಾಗಬೇಕು. ಮತ್ತೆ ಹಿಂದಿನ ಬಾರಿಯಂತೆ ಕಾಂಗ್ರೆಸ್ ಬಗ್ಗೆ ಚುನಾವಣೆಯಲ್ಲಿ ಅಪಪ್ರಚಾರ ಮಾಡಲು ಬಿಜೆಪಿ ಪರೇಶ ಮೇಸ್ತಾರ ಸಾವಿನ ಪ್ರಕರಣವನ್ನು ಬಳಸಬಾರದು ಎಂದು ಮಾಜಿ ಶಾಸಕ ಸತೀಶ ಸೈಲ್ ಆಗ್ರಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು