ಕಾರವಾರ: ಗದ್ದೆ ಸುತ್ತ ಅನಧಿಕೃತವಾಗಿ ವಿದ್ಯುತ್ ತಂತಿ ಅಳವಡಿಸಿದ ಕಾರಣ ಶಾಕ್ ತಗುಲಿ ಸಾಕುಪ್ರಾಣಿಗಳು ಘಟನೆ ಕಾರವಾರ ತಾಲೂಕಿನ ಬೋರಿಭಾಗದಲ್ಲಿ ನಡೆದಿದೆ.
ಬೋರಿಬಾಗದ ನರಸೀಂಹ ಕಾಣೀಕರ, ಆನಂದರಾಯ ಕಾಣೀಕರ, ದಯಾನಂದ ಕಾಣೀಕರ ಮಾಲಿಕತ್ವದ ಜಮೀನಿನಲ್ಲಿ ಪಂಪ್ ಸೆಟ್ ಶೆಡ್ನಿಂದ ಅಕ್ರಮವಾಗಿ ಗದ್ದೆಯ ಸುತ್ತ ವಿದ್ಯುತ್ ತಂತಿ ಅಳವಡಿಸಿದ್ದು, ಮೇಯಲು ಹೋಗಿದ್ದ ಜಾನುವಾರುಗಳು ಕರೆಂಟ್ ಶಾಕ್ ಹೊಡೆದು ಮೃತಪಟ್ಟಿವೆ.
ಪ್ರದೀಪ ವಾಘ, ಸೈರೋಬಾ ದತ್ತಾರಾಮ ನಾಯ್ಕ, ಸಾವಳೋ ಕುಶಾಲ ನಾಯ್ಕ ಅವರಿಗೆ ಸೇರಿದ ಎಮ್ಮೆ, ಕೋಣ ಒಳಗೊಡಂಡು 7 ಜಾನುವಾರುಗಳು ಅಸುನೀಗಿವೆ. ಗ್ರಾಮೀಣ ಪೊಲೀಸ್ ಠಾಣೆಗೆ ಪ್ರದೀಪ ವಾಘ ದೂರು ನೀಡಿದ್ದಾರೆ. ಅನಧಿಕೃತ ವಿದ್ಯುತ್ ಸಂಪರ್ಕದಿಂದಲೇ ಜಾನುವಾರು ಮೃತಪಟ್ಟಿವೆ ಎಂದು ಆರೋಪಿಸಿದ್ದಾರೆ.