ಕಾರವಾರ: ಕುಮಟಾ ನಗರದ ರೈಲ್ವೆ ಸ್ಟೇಷನ್ ಬಳಿ ಮಂಗಳವಾರ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ 1.25 ಲಕ್ಷ ರೂ. ಮೌಲ್ಯದ ಗಾಂಜಾ ಹಾಗೂ ಮೂವರು ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿರಸಿ ಮೂಲದ ವಿನಾಯಕ ಕೆಂಪಣ್ಣ ಕರ್ನಿಂಗ, ನಿಖಿಲ ಮಾದೇವ ಅಂಬಿಗ ಹಾಗೂ ಭಟ್ಕಳ ಮೂಲದ ಸಮಿ ಅಬ್ಬಾಸ್ ಬಂಧಿತ ಆರೋಪಿಗಳಗಿದ್ದಾರೆ.
ರೈಲ್ವೆ ನಿಲ್ದಾಣದ ಬಳಿ ಗಾಂಜಾ ಮಾರುವ ಖಚಿತ ಮಾಹಿತಿಯನ್ನು ಮೇರೆಗೆ ಕುಮಟಾ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 1.25 ಲಕ್ಷ ರೂ ಮೌಲ್ಯದ 4.76 ಕೆ.ಜಿ. ಗಾಂಜಾ ಹಾಗೂ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳ ಪೈಕಿ ಶಿರಸಿ ಮೂಲದ ಇಬ್ಬರ ಈ ಮೊದಲು ಕೊಲೆ ಯತ್ನ, ದರೋಡೆ ಸೇರಿದಂತೆ ಇತರ ಪ್ರಕರಣಗಳಲ್ಲಿ ಬಂಧಿತರಾಗಿದ್ದರು ಎಂದು ತಿಳಿದುಬಂದಿದೆ.
ಪ್ರಕರಣ ಕುಮಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ದಾಳಿಯಲ್ಲಿ ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಪಿಎಸ್ಐ ರವಿ ಗುಡ್ಡಿ, ಸಿಬ್ಬಂದಿ ಗಣೇಶ್ ನಾಯ್ಕ, ಗುರು ನಾಯಕ, ಅಸಿಫ್, ಲೋಕೇಶ್ ಅರಿಶಿನಗುಪ್ಪಿ, ರಾಜು ನಾಯ್ಕ, ಶಿವಾನಂದ ಜಾಡರ, ಸಂಜೀವ ನಾಯ್ಕ ಇದ್ದರು.