ಕೊಡಗು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಡಿ.21 ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಏಳು ದಿನಗಳ ಕಾಲ ನಡೆಯಲಿರುವ ವಿಶ್ವ ಜಾಂಬೂರಿ ಸಾಂಸ್ಕೃತಿಕ ಸಮ್ಮೇಳನಕ್ಕೆ ಕೊಡಗು ಜಿಲ್ಲೆಯಿಂದ ಹೊರೆಕಾಣಿಕೆಯಾಗಿ 1250 ಕೆ.ಜಿ.ಕಾಫಿ ಪುಡಿಯನ್ನು ನೀಡಲಾಗಿದೆ.
ಕೂಡ್ಲೂರು ಎಸ್.ಎಲ್.ಎನ್. ಕಾಫಿ ಕಂಪನಿಯಿಂದ 1000 ಕೆ.ಜಿ.ಲೆವಿಸ್ಟಾ ಕಾಫಿ, ಅರಮೇರಿ ಮಠದ ಎಸ್.ಎಂ.ಎಸ್. ವಿದ್ಯಾಸಂಸ್ಥೆ ವತಿಯಿಂದ 146 ಕೆ.ಜಿ. ಹಾಗೂ ಕೂಡ್ಲೂರು ಸುವರ್ಣ ಕಾಫಿ ಕಂಪನಿ ವತಿಯಿಂದ 50 ಕೆ.ಜಿ.ಕಾಫಿಪುಡಿಯನ್ನು ಮೂಡುಬಿದಿರೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ ಎಂ.ಮೋಹನ್ ಆಳ್ವಾ ಅವರಿಗೆ ಹಸ್ತಾಂತರಿಸಲಾಯಿತು.