ಕಾರವಾರ: ತಾಲೂಕಿನ ಮಾಜಾಳಿಯ ಹಿಪ್ಪಲಿ ಕಡಲ ತೀರದಲ್ಲಿ ಸಂರಕ್ಷಿಸಲ್ಪಟ್ಟ ಒಲಿವ್ ರೆಡ್ಲಿ ಕಡಲಾಮೆಯ ಮೊಟ್ಟೆ ಗೂಡಿನಿಂದ ಹೊರ ಬಂದ 75ಕ್ಕೂ ಅಧಿಕ ಆಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಯಿತು.
ಕಳೆದ ಕೆಲವು ದಿನಗಳ ಹಿಂದೆ ಮಾಜಾಳಿಯ ಹಿಪ್ಪಳಿ ಕಡಲತೀರದಲ್ಲಿ ಆಮೆ ಮೊಟ್ಟೆಯನ್ನು ತೆರಳಿತ್ತು. ಅದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಆ ಮೊಟ್ಟೆ ಗೂಡುಗಳನ್ನು ಸಂರಕ್ಷಣೆ ಮಾಡಿದ್ದರು. ಈಗ ಮೊಟ್ಟೆಯಿಂದ ಆಮೆಯ ಮರಿಗಳು ಹೊರ ಬಂದಿದ್ದು ಅವುಗಳನ್ನು ಸಮುದ್ರಕ್ಕೆ ಬಿಡಲಾಯಿತು.
ಈ ಸಂದರ್ಭದಲ್ಲಿ ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ್ ಕೆ.ಸಿ., ಆರ್.ಎಫ್.ಒ. ಪ್ರಮೋದ ನಾಯಕ, ಗಜಾನನ ನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ ಯರಗಟ್ಟಿ, ಮಾಜಾಳಿ ಪಂಚಾಯತ್ ಅಧ್ಯಕ್ಷ ಕೃಷ್ಣ ಮಾಳ್ಸೇಕರ್, ಗ್ರಾಮದ ಪ್ರಮುಖ ಶ್ರೀಪಾದ, ಆನಂದ ಸೈಲ್, ಸ್ಥಳೀಯರು, ಕಡಲಾಮೆ ಪ್ರಿಯರು ಇದ್ದರು.