ಉಡುಪಿ: ವಿದ್ಯುತ್ ಸ್ಪರ್ಶಿಸಿ ರಾಷ್ಟ್ರಪಕ್ಷಿ ನವಿಲೊಂದು ಮೃತಪಟ್ಟ ಘಟನೆ ಚಿಟ್ಪಾಡಿ ಹನುಮಾನ್ ಗ್ಯಾರೇಜ್ ಬಳಿ ಇಂದು ನಡೆದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು, ನವಿಲನ್ನು ಪಶುವೈದ್ಯ ಸಂದೀಪ್ ಕುಮಾರ್ ಅವರ ಬಳಿಗೆ ಕರೆದೊಯ್ದಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು, ನವಿಲು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಆ ಬಳಿಕ ನವಿಲಿನ ಮೃತದೇಹವನ್ನು ನಿತ್ಯಾನಂದ ಒಳಕಾಡು ಅವರು, ಅರಣ್ಯ ವೀಕ್ಷಕ ಅಶ್ವಿನ್ ಅವರಿಗೆ ಹಸ್ತಾಂತರ ಮಾಡಿದರು.