News Karnataka Kannada
Sunday, April 28 2024
ಉಡುಪಿ

ಉಡುಪಿ: ಸಮಗ್ರ ಗೀತಾ ಪಾರಾಯಣ, ಗೀತಾ ಸಮೀಕ್ಷಾ ಪುಸ್ತಕ ಲೋಕಾರ್ಪಣೆ

Samagra Geetha Parayana, Geetha Samiksha book released
Photo Credit : News Kannada

ಉಡುಪಿ: ಶ್ರೀಕೃಷ್ಣಮಠದ ಪರಿಸರದಲ್ಲಿ ಸುಮಾರು 30 ವರ್ಷಗಳ ಹಿಂದೆ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಭವ್ಯವಾಗಿ ನಿರ್ಮಿಸಿರುವ ಗೀತಾಮಂದಿರದಲ್ಲಿ ಗೀತಾ ಜಯಂತಿಯ ಅಂಗವಾಗಿ ಸಮಗ್ರ ಗೀತಾ ಪಾರಾಯಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪಾರಾಯಣದ ನಂತರ ಶ್ರೀಪಾದರು, ಗೀತಾ ಸಂದೇಶವನ್ನು ನೀಡಿದರು. ಶತಾವಧಾನಿಗಳಾದ ಉಡುಪಿ ರಾಮನಾಥ ಆಚಾರ್ಯ ಅವರು ಸಂಪಾದಿಸಿರುವ ಗೀತಾ ಸಮೀಕ್ಷಾ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.

ಗೀತಾ ಜಯಂತಿಯ ಪ್ರಯುಕ್ತ 20ಕ್ಕೂ ಹೆಚ್ಚಿನ ಶಾಲೆಗಳಲ್ಲಿ ನಡೆದ ಕಂಠಪಾಠ ಸ್ಪರ್ಧೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ಡಾ. ಬಿ. ಗೋಪಾಲಾಚಾರ್ಯ ಹಾಗೂ ಮಹಿತೋಷ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು