ಕುಂದಾಪುರ: ಬ್ರಹ್ಮವಾರ ತಾಲೂಕಿನ ಕೋಟ-ಉಪ್ಲಾಡಿ ಸಮೀಪ ತಸ್ಮಯಿ ರೆಸಿಡೆನ್ಸಿ ಅಪಾಟ್ರ್ಮೆಂಟ್ನ ವಿದ್ಯುತ್ ಟ್ರಾನ್ಸ್ ಫಾರ್ಮರ್ ದುರಸ್ಥಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಮೆಸ್ಕಾಂ ಇಲಾಖೆ ಇಬ್ಬರು ಪವರ್ ಮ್ಯಾನ್ ಸಿಬ್ಬಂದಿಗಳಿಗೆ ವಿದ್ಯುತ್ ಶಾಕ್ ತಗುಲಿದ ಘಟನೆ ನಡೆದಿದೆ.
ಕೋಟ ಮೆಸ್ಕಾಂ ಪವರ್ ಮ್ಯಾನ್ ಸಿಬ್ಬಂದಿಗಳಾದ ರಮೇಶ್ (27),ಸುದರ್ಶನ್ (26) ವಿದ್ಯುತ್ ಶಾಕ್ ನಿಂದ ಗಾಯಗೊಂಡಿದ್ದಾರೆ.ರಮೇಶ್ ಎನ್ನುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ.ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.