ಉಡುಪಿ: ಪಾಂಬೂರು ಪರಿಚಯ ಪ್ರತಿಷ್ಠಾನದ ಕನಸಿನ ಯೋಜನೆಯಾದ ಬಯಲು ರಂಗಮಂದಿರ ‘ರಂಗಪರಿಚಯ’ ನಿರ್ಮಾಣ ಹಂತದಲ್ಲಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ವಿಲ್ಸನ್ ಕಯ್ಯಾರ್ ಅವರು ವಿನ್ಯಾಸಗೊಳಿಸುತ್ತಿದ್ದಾರೆ.
ನೂತನ ರಂಗಮಂದಿರದಲ್ಲಿ ಫೆಬ್ರವರಿ 12ರಿಂದ 18ರ ವರೆಗೆ ‘ಪರಿಚಯ ರಾಷ್ಟ್ರೀಯ ರಂಗೋತ್ಸವ 2023’ ನಾಟಕ ಸಪ್ತಾಹ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ನೊರೋನ್ನಾ ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಂಗೋತ್ಸವದಲ್ಲಿ ಕನ್ನಡ, ಕೊಂಕಣಿ, ತುಳು, ಹಿಂದಿ, ಬುಂಧೇಲಿ ಸೇರಿದಂತೆ
ಏಳು ಭಾಷೆಗಳ ಏಳು ನಾಟಕಗಳ ಹಬ್ಬ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಅನಿಲ್ ಡೇಸಾ, ಖಜಾಂಚಿ ಐವನ್ ಪೀಟರ್, ಟ್ರಸ್ಟಿ ಅರುಳ್ ಡಿಸೋಜಾ, ಕುರ್ಕಾಲು ಸದಾಶಿವ ಬಂಗೇರ ಉಪಸ್ಥಿತರಿದ್ದರು.