ಉಡುಪಿ: ಮಿತ್ರ ಯುವಕ ಮಂಡಲ(ರಿ) ಮತ್ತು ಮಿತ್ರ ಮಹಿಳಾ ಮಂಡಳಿಯ 26 ನೇ ವರ್ಷದ ಪ್ರತಿಭಾ ಸಂಗಮದ ಪ್ರಯುಕ್ತ ಕ್ರೀಡಾಕೂಟವು ಜನವರಿ 1 ರ ರವಿವಾರ ದಂದು ನಡೆಯಿತು.
ಮಿತ್ರ ಯುವಕ ಮಂಡಲದ ಅಧ್ಯಕ್ಷರಾದ ದಿನೇಶ್ ಅಲ್ಯೋಟ್ಟು ,ಕ್ರೀಡಾ ಕಾರ್ಯದರ್ಶಿ ಯಾದ ಪ್ರಸಾದ್ ಪಾಂಗಲ ಗೌರವ ಸಲಹಗಾರಾದ ಸುಂದರ ಬಂಗೇರ ಅಲ್ಯೋಟ್ಟು ಮತ್ತು ಮಿತ್ರ ಮಹಿಳಾ ಮಂಡಳಿ ಅಧ್ಯಕ್ಷರಾದ ಪ್ರತಿಮಾ ದಿನೇಶ್ ಗೌಡ ಇವರು ಸಭೆಯನ್ನು ಅಲಂಕರಿಸಿ ದೀಪಾ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಚಾಲನೆ ನೀಡಿದರು. 26 ನೇ ವರ್ಷದ ಪ್ರತಿಭಾ ಸಂಗಮದ ನೆನಪಿಗಾಗಿ ಈ ಸಂಧರ್ಭದಲ್ಲಿ T-shirts ಯನ್ನು ಮಿತ್ರ ಯುವಕ ಮಂಡಲದ ಸದಸ್ಯರ ಜೊತೆ ಗೂಡಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಿತ್ರ ಯುವಕ ಮಂಡಲದ ಸದಸ್ಯರು ಮಿತ್ರ ಮಹಿಳಾ ಮಂಡಲದ ಸದಸ್ಯರು ಹಾಗೂ ಊರ ಪರವೂರ ಬಂಧುಮಿತ್ರರು ಉಪಸ್ಥಿತಿದ್ದರೂ. ಬೆಳಗ್ಗಿನಿಂದ ಸಂಜೆಯ ವರೆಗು ವಿವಿಧ ರೀತಿಯ ಕ್ರೀಡೆಗಳನ್ನು ಆಯೋಜಿಸಲಾಗಿತ್ತು ಸೇರಿದಂತ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು..