ಉಡುಪಿ : ಉಡುಪಿಯ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವಿಭಾಗ ಮಟ್ಟದ ದಸರಾ ವುಶು ಕ್ರೀಡಾಕೂಟದಲ್ಲಿ
ನೆಲ್ಯಹುದಿಕೇರಿಯ ಕೆ.ಎಸ್.ಸ್ವರ್ಣಿಕ ಚಿನ್ನದ ಪದಕ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಕೊಡಗು ವುಶು ಸಂಸ್ಥೆಯ ರಾಜ್ಯ ತರಬೇತುದಾರ ಎನ್.ಸಿ.ಸುದರ್ಶನ ತರಬೇತಿ ನೀಡಿದ್ದಾರೆ. ಇವಳು ನೆಲ್ಯಹುದಿಕೇರಿ ಗ್ರಾಮದ ಶ್ರೀಜಾ ಮತ್ತು ಸುಬ್ರಮಣಿ ದಂಪತಿಗಳ ಪುತ್ರಿ.
ಶ್ರೀ ಕೃಷ್ಣ ವಿದ್ಯಾಮಂದಿರದಲ್ಲಿ ೫ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.