ಉಡುಪಿ: ಸಚಿವ ಚೆಲುವರಾಯಸ್ವಾಮಿ ಗ್ಯಾರೆಂಟಿಗಳು ಗಿಮಿಕ್ ಎಂದಿದ್ದಾರೆ. ಈ ಮೂಲಕ ಇರುವ ಸತ್ಯವನ್ನು ಕಾಂಗ್ರೆಸ್ಸಿಗರು ಒಪ್ಪಿಕೊಂಡಂತಾಗಿದೆ. ಇವರು ಚುನಾವಣೆಗಾಗಿ ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಸಾರ್ವತ್ರಿಕವಾಗಿ ರಾಜ್ಯಕ್ಕೆ ಗೊತ್ತಾಗಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಲೇವಡಿ ಮಾಡಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುತೇಕ ಎಲ್ಲಾ ಕಾಂಗ್ರೆಸ್ಸಿಗರಿಗೆ ಗ್ಯಾರೆಂಟಿ ಅಸಾಧ್ಯ ಎಂದು ಗೊತ್ತಿರಬಹುದು. ಆರ್ಥಿಕವಾಗಿ ಬಹುದೊಡ್ಡ ಕುಸಿತ ಮತ್ತು ಹೊಡೆತ ಎಂದು ತಿಳಿದಿರಬಹುದು.
ಮತಕ್ಕಾಗಿ, ಗೆಲ್ಲಲು ಹೀಗೆ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಅವರಿಗೂ ಅರ್ಥವಾಗಿರಬಹುದು. ಸತ್ಯ ಒಪ್ಪಿಕೊಂಡ ಚೆಲುವರಾಯಸ್ವಾಮಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.