News Karnataka Kannada
Friday, May 10 2024
ಉಡುಪಿ

ಉಡುಪಿ: ಶ್ರೀ ನಾರಾಯಣಗುರು ನಿಗಮ ಮಂಡಳಿ ಘೋಷಣೆ ಸ್ವಾಗತಾರ್ಹ- ಕೋಟ ಶ್ರೀನಿವಾಸ ಪೂಜಾರಿ

Udupi: Sri Narayana Guru Nigam Board's announcement is welcome: Kota Srinivas Poojary
Photo Credit : News Kannada

ಉಡುಪಿ: ಬಿಲ್ಲವ ಸಮಾಜದ ಬಹುದಿನಗಳ ಬೇಡಿಕೆಯಂತೆ ಶ್ರೀ ನಾರಾಯಣಗುರು ನಿಗಮ ಮಂಡಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಹಲವಾರು ನಿಗಮಗಳನ್ನು ಕ್ರೂಢೀಕರಿಸಿದಂತೆ ಸಾಕಷ್ಟು ಅನುದಾನ ಮೀಸಲಿಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಲ್ಲವ ಅಭಿವೃದ್ಧಿ ನಿಗಮ‌ ಘೋಷಣೆ ಚುನಾವಣೆ ಗಿಮಿಕ್ ಎಂಬ ವಿನಯಕುಮಾರ್ ಸೊರಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರಕಾರ ಒಂದು ಯೋಜನೆ ಘೋಷಣೆ ಮಾಡಿದ್ರೆ, ಆರ್ಥಿಕ ಇಲಾಖೆ ಮೂಲಕ ಅನುದಾನ ನಿಗದಿ ಮಾಡುವ ಜವಾಬ್ದಾರಿ ಕೂಡ ಅದಕ್ಕೆ ಇದೆ. ಹಣಕಾಸು ಇಲಾಖೆಯನ್ನು ಹೊಂದಿರುವ ಮುಖ್ಯಮಂತ್ರಿಗಳು ಯಾವುದಾದ್ರೂ ಒಂದು ಯೋಜನೆ ಘೋಷಣೆ ಮಾಡಿದ್ರೆ, ಅದಕ್ಕೆ ಪೂರ್ಣಪ್ರಮಾಣದ ಹಣ ನಿಗದಿ ಮಾಡುವ ಅಧಿಕಾರ ಕೂಡ ಅವರಿಗಿದೆ. ಅದರಂತೆ ಇದೀಗ ನಾರಾಯಣಗುರುಗಳ ಅಭಿವೃದ್ಧಿ ನಿಗಮ ಘೋಷಣೆ ಮಾಡಿದ್ದಾರೆ. ಇದನ್ನು ವಿನಯಕುಮಾರ್ ಸೊರಕೆ ಅವರು ಅರಿತುಕೊಳ್ಳಬೇಕು ಎಂದರು.

108 ಜಾತಿಗಳು ನಮ್ಮ ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿ ಬರುತ್ತವೆ. ಆ ಪೈಕಿ ಬಹುತೇಕ ಜಾತಿಯವರು ನಮಗೊಂದು ಪ್ರತ್ಯೇಕ ನಿಗಮ ಕೊಡಿ ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಬೇರೆ ಸಮುದಾಯದ ಬೇಡಿಕೆ, ಒತ್ತಡಗಳನ್ನು ಗಮನಿಸಿಕೊಂಡು ನಿಗಮ ಘೋಷಣೆ ಮಾಡಲು ಸ್ವಲ್ಪ ವಿಳಂಬ ಆಗಿದೆ. ಆದರೆ ಕಡೆಗೂ ನಿಗಮ ಘೋಷಣೆ ಆಗಿರುವುದು ಸಮಾಧಾನದ ಸಂಗತಿ. ಅದಕ್ಕೆ ನಾನು ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು