News Karnataka Kannada
Saturday, April 27 2024
ಉಡುಪಿ

ಚುನಾವಣೆ ಬಹಿಷ್ಕರಿಸಲು ಮರವಂತೆ ಮೀನುಗಾರರ ನಿರ್ಧಾರ

Maravante fishermen's decision to boycott elections
Photo Credit : News Kannada

ಕುಂದಾಪುರ: ಮರವಂತೆ  ಹೊರ ಬಂದರು ಕಾಮಗಾರಿ ಅಪೂರ್ಣ ಮತ್ತು ತೌಕ್ತೆ ಚಂಡ ಮಾರುತದಿಂದ ಹಾನಿಗೊಳಗಾದ ಮರವಂತೆ ಕರಾವಳಿ ಭಾಗದ ಮೀನುಗಾರಿಕಾ ರಸ್ತೆ ಅಭಿವೃದ್ಧಿ ನಿರ್ಲಕ್ಷ್ಯ ಹಾಗೂ ಮೀನುಗಾರರಿಗೆ ಬಹುಮುಖ್ಯವಾಗಿ ಬೇಕಾಗಿರುವ ಸೀಮೆ ಎಣ್ಣೆಯನ್ನು ಸರಕಾರ ಸಮರ್ಪಕವಾದ ರೀತಿಯಲ್ಲಿ ವಿತರಣೆ ಮಾಡದೆ ಇರುವುದರಿಂದ ಬೇಸತ್ತ ಸಮಸ್ತ ಮೀನುಗಾರರು ಮೇ.10 ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡದೆ ಇರಲು ನಿರ್ಧರಿಸಿದ್ದೇವೆ ಎಂದು ಶ್ರೀರಾಮ ಮಂದಿರ ಮರವಂತೆ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ವಾಸುದೇವ ಖಾರ್ವಿ ತಿಳಿಸಿದ್ದಾರೆ.

ಮರವಂತೆ ಹೊರ ಬಂದರು ಪ್ರದೇಶದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೀನುಗಾರರ ಸಂಕಷ್ಟದ ಬಗ್ಗೆ ಮಾಹಿತಿಯನ್ನು ನೀಡಿದರು.

ಮರವಂತೆ ಪ್ರದೇಶಕ್ಕೆ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು,ಅಧಿಕಾರಿ ವರ್ಗದವರು ಭೇಟಿ ನೀಡಿ ಮೀನುಗಾರರ ಕಷ್ಟವನ್ನು ಕಣ್ಣಾರೆ ನೋಡಿ ಹೋಗಿದ್ದರು ಸಮಸ್ಯೆಗಳ ಪರಿಹಾರಕ್ಕೆ ಇಲ್ಲಿ ತನಕ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳದೆ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸರಕಾರದ ವಿರುದ್ಧ ಅಸಾಮಾಧಾನವನ್ನು ತೊಡಿಕೊಂಡ ಮೀನುಗಾರರ ಸಮಿತಿ ಅಧ್ಯಕ್ಷರು ಚುನಾವಣೆ ಮುನ್ನ ಕೆಲಸ ಆರಂಭಿಸದೆ ಹೋದರೆ ಮರವಂತೆ ಭಾಗದ ಮೀನುಗಾರಿಕಾ ಕುಟುಂಬದವರು ಚುನಾವಣೆಯಲ್ಲಿ ಮತದಾನ ಮಾಡದೆ ಇರಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ತೌಕ್ತೆ ಚಂಡಮಾರುತದಿಂದ ಮರವಂತೆ ಕಡಲ ತೀರಿ ಪ್ರದೇಶ ಭಾಗಶಃ ಹಾನಿಯಾಗಿದೆ 50ಕ್ಕೂ ಹೆಚ್ಚಿನ ಮೀನುಗಾರಿಕಾ ಶೆಡ್ಡುಗಳು,300ಕ್ಕೂ ಅಧಿಕ ತೆಂಗಿನ ಮರಗಳು ನಾಶವಾಗಿದ್ದು,ಮೀನುಗಾರಿಕಾ ರಸ್ತೆ ಸಂಪೂರ್ಣ ಹಾಳಾಗಿದೆ.ಮಳೆಗಾಲ ಹತ್ತಿರವಾಗುತ್ತಿದ್ದು ಕಡಲ ತೀರ ರಕ್ಷಣೆಗೆ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ.ಜೂನ್ ತಿಂಗಳ ಆರಂಭದಲ್ಲಿ ಮೊದಲ ತೂಫಾನ್‍ಗೆ ಮರವಂತೆ ಮೀನುಗಾರಿಕಾ ಬಂದರನ್ನು ಕಡಲು ಅಪೋಷಣೆ ಗೈಯಲಿದೆ ಬಂದರು ನಾಶವಾದರೆ ಮೀನುಗಾರರ ಬದುಕಿಗೆ ಕಂಟಕವಾಗಲಿದೆ ಎಂದು ಮೀನುಗಾರರು ತಮ್ಮ ಆತಂಕವನ್ನು ಹೊರ ಹಾಕಿದರು.

ಸರಕಾರದ ನಿರ್ಲಕ್ಷ್ಯದ ಧೋರಣೆ ಒಳಗಾದ ಮರವಂತೆ ಬಂದರಿನ ದುರಸ್ಥಿಗೆ ಮೀನುಗಾರರ ಸೇವಾ ಸಮಿತಿ ವತಿಯಿಂದ ವರ್ಷಕ್ಕೆ 30 ರಿಂದ 40 ಲಕ್ಷ.ರೂ ಹಣವನ್ನು ವ್ಯಹಿಸಲಾಗುತ್ತಿದೆ.ಹೊಟ್ಟೆ ಪಾಡಿಗಾಗಿ ದುಡಿದು ತಿನ್ನುತ್ತಿರುವ ನಾವು ದುಡಿಮೆಯ ಮೂಕ್ಕಾಲು ಪರ್ಸೆಂಟ್ ಹಣವನ್ನು ಬಂದರಿಗೆ ವ್ಯಯಿಸುತ್ತಿದ್ದೇವೆ ಎಂದು ಮಾಧ್ಯಮದವರ ಎದುರು ತಮ್ಮ ನೋವನ್ನು ತೊಡಿಕೊಂಡರು.

ಮರವಂತೆ ಬಂದರಿನ ಒಂದನೇ ಹಂತದ ಕಾಮಗಾರಿಗೆ ಚಾಲನೆ ನೀಡಿ 10 ವರ್ಷ ಕಳೆದಿದೆ 3 ವರ್ಷದೊಳಗೆ ಪೂರ್ಣ ಗೊಳಿಸಬೇಕ್ಕೆನ್ನುವ ಕಾನೂನು ಇದ್ದರೂ ಪೂರ್ಣಗೊಂಡಿಲ್ಲ.ಬದಲಾಗಿ 85.ಕೋಟಿ.ರೂ ವೆಚ್ಚದಲ್ಲಿ 2ನೇ ಹಂತದದ ಕಾಮಗಾರಿ ನಿರ್ಮಿಸಲು ಉದ್ಘಾಟನೆ ಮಾಡಲಾಗಿದೆ,ಯಾವುದೋ ಒಂದು ಸಣ್ಣ ಕಾರಣದಿಂದ 2ನೇ ಹಂತದದ ಕಾಮಗಾರಿಗೂ ಇನ್ನೂ ಚಾಲನೆ ನೀಡದಿರುವುದು ದುರಂತವಾಗಿದೆ ಎಂದು ಮೀನುಗಾರರು ಹೇಳಿದರು.

ಮರವಂತೆ ಬಂದರು ಮತ್ತು ಕಡಲ ತೀತರದ ಅವ್ಯವಸ್ಥೆಯಿಂದ 5000 ರಿಂದ 6000 ಸಾವಿರ ಜನರ ಉದ್ಯೋಗಕ್ಕೆ ದೊಡ್ಡ ಹೊಡೆತ ಬಿದ್ದಿದೆ.ನಾವೂ ಬದುಕಿಗಾಗಿ ಹೋರಾಟ ಮಾಡುವಂತಹ ಪರಿಸ್ಥಿತಿ ಎದುರಾಗಿದ್ದು ನಮ್ಮ ಅಳಲನ್ನು ಕೇಳುವವರು ಯಾರು ಇಲ್ಲದಂತ್ತಾಗಿದೆ ಎಂದು ಮೀನುಗಾರರ ಮಾರ್ಕೇಟ್ ಸಮಿತಿ ಅಧ್ಯಕ್ಷ ಶಂಕರ ಖಾರ್ವಿ ದೂರಿದರು.

ಇಂದಿನ ಮತ್ತು ಹಿಂದಿನ ಸರಕಾರಗಳು ಆಶ್ವಾಸನೆ ಮೂಲಕ ದಿನಗಳನ್ನು ಕಳೆದಿದ್ದಾರೆ ಯಾರಿಗೂ ಮೀನುಗಾರರ ಬಗ್ಗೆ ಕಾಳಜಿಯೇ ಇಲ್ಲಾ,ಮರವಂತೆ ಮೀನುಗಾರರನ್ನು ಸರಕಾರಗಳು ಸಂಪೂರ್ಣವಾಗಿ ನಿರ್ಲಕ್ಷ್ಯದಿಂದ ನೋಡಿದ್ದರ ಫಲದಿಂದ ಚುನಾವಣೆ ಬಹಿಷ್ಕಾರದಂತ ಧೃಡ ನಿರ್ಧಾರಕ್ಕೆ ಮೀನುಗಾರರು ಬಂದಿದ್ದಾರೆ ಎಂದು ಮಾಜಿ ಅಧ್ಯಕ್ಷ ಮೋಹನ್ ಖಾರ್ವಿ ಹೇಳಿದರು.

ನಾಡದೋಣಿ ಮೀನುಗಾರರಿಗೆ ಬಹುಮುಖ್ಯವಾಗಿ ಬೇಕಾಗಿರುವ ಸೀಮೆ ಎಣ್ಣೆಯನ್ನು ನೀಡಲು ಸರಕಾರಕ್ಕೆ ಮನಸ್ಸಿಲ ಎನ್ನುವಂತೆ ವರ್ತಿಸುತ್ತಿದೆ.ಎಂಟು ತಿಂಗಳ ಅವಧಿಯಲ್ಲಿ ಒಟ್ಟು ಮೂರು ಬಾರಿ ಮಾತ್ರ ಸೀಮೆ ಎಣ್ಣೆಯನ್ನು ನೀಡಿದ್ದಾರೆ ಎಂದು ಮೀನುಗಾರರು ಸರಕಾರದ ವಿರುದ್ಧ ದೂರಿದರು.

ನಾಡದೋಣಿ ಒಕ್ಕೂಟದ ವತಿಯಿಂದ ಸಚಿವರು,ಇಲಾಖಾ ಅಧಿಕಾರಿಗಳನ್ನು ಭೇಟಿ ಮಾಡಿದ್ದರು ಯಾವುದೇ ರೀತಿಯಾ ಪ್ರಯೋಜನೆ ಆಗಿಲ್ಲ.ಮೀನುಗಾರರ ಮುಗ್ಧತೆ ಮೀನುಗಾರರಿಗೆ ಮುಳುವಾಗಿದೆ ಎಂದು ಮೀನುಗಾರರು ತಮ್ಮ ಅಸಮಾದಾನವನ್ನು ತೊಡಿಕೊಂಡರು.ಈ ಸಂದರ್ಭದಲ್ಲಿ ಮೋಹನ್ ಖಾರ್ವಿ,ಚಂದ್ರಖಾರ್ವಿ,ವೆಂಕಟರಮಣ ಖಾರ್ವಿ,ಸೋಮಯ್ಯ ಖಾರ್ವಿ,ಉಪಾಧ್ಯಕ್ಷ ಶಂಕರ ಖಾರ್ವಿ ಹಾಗೂ ಶ್ರೀರಾಮ ಮಂದಿರ ಮರವಂತೆ ಮೀನುರಾರರ ಸೇವಾ ಸಮಿತಿ ಸದಸ್ಯರು,ಮೀನುಗಾರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು