News Karnataka Kannada
Friday, May 03 2024
ಕರಾವಳಿ

ಕಾರ್ಕಳ: ಸರ್ಕಾರದ ಸವಲತ್ತು ಸದುಪಯೋಗ, ಸಚಿವ ಸುನೀಲ್‌ ಆಶಯ

Karkala: Good use of government privilege, Minister Sunil
Photo Credit : News Kannada

ಕಾರ್ಕಳ: ಹಕ್ಕು ಪತ್ರ ಪಡೆದು  ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆಯ ಬಹುದು ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ ಸುನೀಲ್ ಕುಮಾರ್ ಹೇಳಿದರು. ಮಂಗಳವಾರ ಕಾರ್ಕಳ ಮಂಜುನಾಥ್ ಪೈ ಸಭಾಂಗಣದಲ್ಲಿ ನಡೆದ ಫಲಾನುಭವಿಗಳಿಗೆ  ಸವಲತ್ತುಗಳನ್ನು ವಿತರಿಸಿ ಮಾತನಾಡಿದರು .

ಸರಕಾರಿ ಜಾಗದಲ್ಲಿ ಮನೆಕಟ್ಟಿ ಕುಳಿತ ಅರ್ಹ ಕುಟುಂಬಗಳು ಚಿಂತಿಸಬೇಕಿಲ್ಲ, ಹಕ್ಕು ಪತ್ರ ಪಡೆದು ವಾರದೊಳಗೆ ಪಹಣಿ ಪತ್ರ ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳಬಹುದು. ಇಂದಿನಿಂದ ನಿಮ್ಮ ಮನೆಗೆ ನೀವೇ ಅಧಿಕೃತ ಯಜಮಾನರು , ಕಳೆದ ಐದು ವರ್ಷಗಳ ಹೋರಾಟದ ಪಲವಾಗಿ ಡೀಮ್ಡ್ ಪಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಲಾಗಿದೆ . ಇನ್ನೂ ಮುಂದೆ ಭಯ ಪಡುವ ಅಗತ್ಯ ವಿಲ್ಲ .

ಬಿಜೆಪಿ  ಸರ್ಕಾರದ ಸಾಧನೆ: ಸರ್ಕಾರ ಘೋಷಣೆ ಮಾಡಿದ ಸೌಲಭ್ಯಗಳು ಬೆಂಗಳೂರು ದೆಹಲಿಗೆ ಮಾತ್ರ ಸೀಮಿತ ವಾಗಿರುತಿತ್ತು. ಅದರೆ ಇಂದು ಬಿಜೆಪಿಯ ಡಬಲ್ ಎಂಜಿನ್  ಸರ್ಕಾರದ ಕ್ರಮದಿಂದ ಘೋಷಣೆಯಾದ ಸೌಲಭ್ಯ ಗಳು ಜನರ ಮನೆಬಾಗಿಲಿಗೆ ತಲುಪುತ್ತಿವೆ ಎಂದರು.

ಇದೆ ಸಂದರ್ಭದಲ್ಲಿ ಕಾರ್ಕಳ ತಾಲೂಕಿನ ವಿವಿಧ ಗ್ರಾ.ಪಂ ಗಳ 1000ಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಸೇರಿದಂತೆ ವಿವಿಧ ಸರಕಾರದ ಸವಲತ್ತುಗಳನ್ನು ವಿತರಣೆ ಮಾಡಲಾಯಿತು.

ಸಭೆಯಲ್ಲಿ ಕಾರ್ಕಳ ತಹಸೀಲ್ದಾರ್ ಅನಂತ ಶಂಕರ್ , ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ರೂಪ , ಪುರಸಭಾ ಅಧ್ಯಕ್ಷೆ ಸುಮಾ ಕೇಶವ, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಕುಕ್ಕೂಂದೂರು ಪಂ ಅದ್ಯಕ್ಷೆ ಶಶಿಮಣಿ , ಶಿರ್ಲಾಲು ಗ್ರಾ ಪಂ ಅಧ್ಯಕ್ಷ ರಮಾನಂದ ಪೂಜಾರಿ ಉಪಸ್ಥಿತರಿದ್ದರು.
ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಗುರುದತ್ , ಸೇರಿದಂತೆ ಪ್ರಮುಖ ರು ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು