ಕಾರ್ಕಳ : ಭಾರತದ ಪಿತಾಮಹ, ಶಾಂತಿದೂತ ಎಲ್ಲಾ ಜಾತಿ ಧರ್ಮಗಳನ್ನು ಸಮಾನತೆಯಿಂದ ಕಂಡು ಇತರರು ಅದನ್ನು ಪಾಲಿಸಲು ಕರೆಕೊಟ್ಟು, ದೇಶದ್ರೋಹಿಗಳ ಗುಂಡಿಗೆ ಬಲಿಯಾಗಿ ಹುತಾತ್ಮರಾದ ಮಹಾತ್ಮ ಗಾಂಧಿಯವರ ತತ್ವಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಪಾಲಿಸಿ, ಜನತೆಗೆ ತಿಳಿಸಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸದಾಶಿವ ದೇವಾಡಿಗರವರು ಹೇಳಿದರು.
ಅವರು ಇಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಹಾತ್ಮಗಾಂಧೀಜಿಯವರ ಹುತಾತ್ಮ ದಿನದ ಪ್ರಯುಕ್ತ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿದರು.
ಹಾಗೂ ಕಾಂಗ್ರೆಸ್ ಮುಖಂಡ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದ ರಾಹುಲ್ ಗಾಂಧಿಯವರ 3970 ಕಿಲೋ ಮೀಟರ್ ಪಾದಯಾತ್ರೆ “ಭಾರತ್ ಜೋಡೊ” ಯಾತ್ರೆಯ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ರಾಹುಲ್ ಗಾಂಧಿಯವರ ದೀರ್ಘ ಪಾದಯಾತ್ರೆಯ ನಿಜವಾದ ಉದ್ದೇಶಗಳನ್ನು ಜನರಿಗೆ ತಿಳಿಸಲು ಕರೆಕೊಟ್ಟರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಹಾಗೂ ಅಭ್ಯರ್ಥಿ ಅಕಾಂಕ್ಷಿಗಳಾದ ಸುರೇಂದ್ರ ಶೆಟ್ಟಿ, ಮತ್ತು ಡಿ.ಆರ್. ರಾಜು, ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ಕಾರ್ಯದರ್ಶಿ ಪ್ರಭಾಕರ ಬಂಗೇರಾ, ಜಿಲ್ಲಾ ಮ. ಕಾಂಗ್ರೆಸ್ ಸದಸ್ಯೆ ಮಾಲಿನಿ ರೈ, ಪುರಸಭಾ ಸದಸ್ಯರುಗಳಾದ ಅಶ್ಪಕ್ ಅಹಮ್ಮದ್ ಸೀತರಾಮ, ಹರೀಶ್, ಸೋಮನಾಥ, ಪ್ರತಿಮಾ ಮಾಜಿ ಸದಸ್ಯ ನವೀನ ದೇವಾಡಿಗ,ಜಿ.ಅಲ್ಪ.ಸಂ. ಸದಸ್ಯ ಆರಿಫ್ ಕಲ್ಲೊಟ್ಟೆ, ಅಲ್ಪ ಸಂ. ಘಟಕ ಅಧ್ಯಕ್ಷ ಮಹಮ್ಮದ್ ಅಸ್ಲಾಂ, ಗ್ರಾ.ಪಂ.ಸದಸ್ಯರುಗಳಾದ ಸುಭಾಸ್, ರಂಜನಿ, ವಿಶ್ವನಾಥ ಭಂಡಾರಿ ಹಾಗೂ ಸತೀಶ ರಾವ್, ಸುನಿಲ್ ಭಂಡಾರಿ, ಸುಂದರ ಸಾಲಿಯಾನ್, ನಗರಾಧ್ಯಕ್ಷೆ ಕಾಂತಿ ಶೆಟ್ಟಿ, ಮಹಿಳಾ ಕಾಂ.ಕಾರ್ಯದರ್ಶಿ ಶೋಭ, ಕೃಷ್ಣ ಹೆಗ್ಡೆ,ಮುಸ್ತಾಕ್ ಮೊದಲಾದವರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಜಾರ್ಜ ಕ್ಯಾಸ್ತಲಿನೋ ನಕ್ರೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.