ಕುಂದಾಪುರ: ಮೂಲ ಸೌಕರ್ಯದ ಸೌಲಭ್ಯಗಳನ್ನು ನೀಗಿಸದ ಹಿನ್ನೆಲೆಯಲ್ಲಿ ಬೈಂದೂರು ವಿಧಾನ ಸಭೆ ಕ್ಷೇತ್ರದ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಾಗಿಮನೆ ಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಮತ ಹಾಕದಿರಲು ನಿರ್ಧರಿಸಿದ್ದಾರೆ.
ಆಧುನಿಕ ಯುಗದಲ್ಲಿ ಮಾನವನ ಅವಶ್ಯಕತೆಗಳಲ್ಲಿ ಬಹು ಮುಖ್ಯವಾಗಿ ಬೇಕಾಗಿರುವ ಮೊಬೈಲ್ ಸೇವೆ ಭಾಗಿಮನೆ ಪರಿಸರದ ಜನರಿಗೆ ಮರಿಚಿಕೆ ಆಗಿದೆ.ಮೊಬೈಲ್ ನೆಟ್ವರ್ಕ್ ಅಲಭ್ಯವಾಗಿರುವುದರಿಂದ ಗ್ರಾಮದ ಜನರಿಗೆ ಹೊರ ಜಗತಿನೊಂದಿಗೆ ಸಂಪರ್ಕ ಸಾಧಿಸಲು ಕಷ್ಟ ಸಾಧ್ಯವಾಗಿದೆ.
ಬಹು ವರ್ಷಗಳ ಬೇಡಿಕೆ ಆದ ಮೊಬೈಲ್ ನೆಟ್ವರ್ಕ್ ಸೇವೆ ಕಲ್ಪಿಸಿಕೊಡುವಂತೆ ಭಾಗಿಮನೆ ಗ್ರಾಮಸ್ಥರು ಪಕ್ಷ ಭೇದ ಮರೆತು ಗ್ರಾಮ ಪಂಚಾಯತ್,ಜಿಲ್ಲಾ ಪಂಚಾಯತ್,ಎಂ.ಎಲ್.ಎ ಹಾಗೂ ಸಂಸದರಿಗೆ ಮನವಿಯನ್ನು ಸಲ್ಲಿಸಿದ್ದರು ಸ್ಪಂದನೆ ದೊರೆತ್ತಿಲ್ಲ.
ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಕೆ ಮಾಡದೆ ಇರುವುದರಿಂದ ಮುಂಬರುವ ಚುನಾವಣೆಗಳಲ್ಲಿ ಮತಗಳನ್ನು ಚಲಾಯಿಸದೆ ಇರಲು ತಿರ್ಮಾನಿಸಲಾಗಿದೆ ಇದು ಯಾವುದೆ ಪಕ್ಷದ ವಿರುದ್ಧವಾದ ಹೋರಾಟವಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಅಭಿವೃದ್ಧಿಯಲ್ಲಿ ಹಿಂದುಳಿದ ಗ್ರಾಮಗಳು ಚುನಾವಣೆ ಬಹಿಷ್ಕಾರ ಬ್ಯಾನರ್ ಅಲ್ಲಿಲ್ಲಿ ಅಳವಡಿಸಿ ಪ್ರತಿಭಟಿಸುತ್ತಿದ್ದಾರೆ.ಬೈಂದೂರು ಕ್ಷೇತ್ರವನ್ನು ಸಮಗ್ರವಾಗಿ ಅದ್ಧಿಗೊಳಿಸಲಾಗಿದೆ ಎಂದು ಹೇಳಿಕೊಳ್ಳುವ ಕ್ಷೇತ್ರದ ಶಾಸಕರಿಗೆ ಇದು ಮುಜುಗರದ ಸಂಗತಿ ಆಗಿದೆ ಚುನಾವಣೆ ಹೊತ್ತಿನಲ್ಲಿ ಮತಗಳು ಪರಿವರ್ತನೆ ಆಗುವ ಸಾಧ್ಯತೆಗಳಿದ್ದು ಬಿಜೆಪಿಗೆ ಮತಗಳು ಹೊಡೆತ ಬೀಳುವ ಸಂಭವಿದೆ.