ಕುಂದಾಪುರ: ಗ್ರಾಮ ಪಂಚಾಯತ್ ಆಲೂರು,ನಾಗರಿಕ ಸೇವಾ ಕೇಂದ್ರ ಆಲೂರು,ಅಂಚೆ ಇಲಾಖೆ ಉಡುಪಿ ಅವರ ಸಂಯುಕ್ತ ಆಶ್ರಯದಲ್ಲಿ ಆಧಾರ್ ಕಾರ್ಡ್ ಲಿಂಕಿಂಗ್ ಮತ್ತು ಅಭಾಕಾರ್ಡ್ ನೊಂದಣಿ ಶಿಬಿರ ಕಾರ್ಯಕ್ರಮ ಆಲೂರು ಮೂಕಾಂಬಿಕಾ ಸಭಾ ಭವನದಲ್ಲಿ ಶನಿವಾರ ನಡೆಯಿತು.
ಆಲೂರು ಗ್ರಾ.ಪಂ ಅಧ್ಯಕ್ಷೆ ಜಲಜಾ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು,ಉಪಾಧ್ಯಕ್ಷ ರವಿ ಶೆಟ್ಟಿ ಆಲೂರು,ಪೋಸ್ಟ್ ಮಾಸ್ಟರ್ ರಮೇಶ್ ಪೂಜಾರಿ,ಪ್ರಶಾಂತ್ ಕುಲಾಲ್,ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ರಾಘವೇಂದ್ರ ಆಚಾರ್ಯ,ಆಶಾ ಕಾರ್ಯಕರ್ತೆಯರು,ಗ್ರಾ.ಪಂ ಮತ್ತು ಗ್ರಾಮ ಒನ್ ಸಿಬ್ಬಂದಿಗಳು ಉಪಸ್ಥಿತರಿದ್ದರು.ಗ್ರಾಮ ಒನ್ ಸದಸ್ಯ ರಾಜೇಶ್.ಎನ್ ದೇವಾಡಿಗ ಸ್ವಾಗತಿಸಿ,ವಂದಿಸಿದರು.