ಕುಂದಾಪುರ: ಹೊಸಾಡು ಗ್ರಾಮ ಪಂಚಾಯತ್ನ ೨೦೨೨-೨೩ ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಕೃಷಿ ಇಲಾಖೆಯ ಅಧಿಕಾರಿ ಮತ್ತು ಹೊಸಾಡು ಗ್ರಾಮ ಪಂಚಾಯತ್ನ ಆಡಳಿತಾಧಿಕಾರಿ ರಘು ರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ಶುಕ್ರವಾರ ನಡೆಯಿತು.
ಗ್ರಾಮ ಪಂಚಾಯತ್ ಯೋಜನೆ ಮತ್ತು ಕ್ರೀಯಾ ಯೋಜನೆಗಳ ಬಗ್ಗೆ ಹಾಗು ಎಸ್ಎಲ್ಆರ್ಎಂ ಮತ್ತು ಮಿನಿ ಎಂಆರ್ಎಫ್ ಘಟಕದ ಬಗ್ಗೆ ಚರ್ಚಿಸಲಾಯಿತು,ಅಮೃತ ಸರೋವರ ಯೋಜನೆ,ಜೆಜೆಎಂ,ಇಜಿಒ,ನಮ್ಮ ಗ್ರಾಮ ನಮ್ಮ ಯೋಜನೆ ಬಗ್ಗೆ ಮಾಹಿತಿಯನ್ನು ನೀಡಲಾಯಿತು,ಗ್ರಾಮದ ನಾನಾ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ಪ್ರಸ್ತಾವಿಸಿ,ಪ್ರಶ್ನೆಗಳನ್ನು ಕೇಳಿದರು,ಗ್ರಾ.ಪಂ ಪಿಡಿಒ ಪಾರ್ವತಿ ಹಿಂದಿನ ಗ್ರಾಮ ಸಭೆಯ ನಡಾವಳಿ ಮತ್ತು ನಿರ್ಣಯವನ್ನು ಓದಿ ಹೇಳಿದರು.
ಮೇಸ್ಕಾಂ ಇಲಾಖೆಯ ದಿನೇಶ ಶೆಟ್ಟಿ,ಪಶು ವೈದ್ಯಾಧಿಕಾರಿ ಅರುಣ್ ಕುಮಾರ್,ತೋಟಗಾರಿಕೆ ಇಲಾಖೆ ಅಧಿಕಾರಿ ಉಮೇಶ್,ಆರೋಗ್ಯಾಧಿಕಾರಿ ಹುಲಿಯಪ್ಪ ಗೌಡ,ಗ್ರಾಮ ಕರಣಿಕ ಅನಿಲ್,ಮಹಿಳಾ ಮತ್ತು ಮಕ್ಕಳಾ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರಾಜೇಶ್ವರಿ,ಮಾಜಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಪೂಜಾರಿ,ಹೊಸಾಡು ಶಾಲೆ ಮುಖ್ಯ ಶಿಕ್ಷಕ ರಾಜೇಶ್,ಆಶಾ ಕಾರ್ಯಕರ್ತೆಯರು,ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತೆಯರು,ಸಂಜೀವಿನಿ ಸಂಘದ ಸದಸ್ಯರು,ಗ್ರಾಮಸ್ಥರು,ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.ಪಿಡಿಒ ಪಾರ್ವತಿ ಸ್ವಾಗತಿಸಿದರು.ಸಿಬ್ಬಂದಿ ಶಿವನಂದಾ ವಂದಿಸಿದರು.